ಉಜಿರೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ,ಕಾಂಗ್ರೆಸ್ ಮುಖಂಡ ಇಚ್ಚಿಲ ಸುಂದರ ಗೌಡ ನಿಧನ:

 

 

 

ಬೆಳ್ತಂಗಡಿ; ಕೃಷಿಪತ್ತಿನ ಸೇವಾ ಸಹಕಾರಿ ಬ್ಯಾಂಕ್ ಉಜಿರೆ  ಅಧ್ಯಕ್ಷ,ಹಿರಿಯ ಕಾಂಗ್ರೆಸ್ ಮುಖಂಡ ಇಚ್ಚಿಲ ಸುಂದರ ಗೌಡ (78) ಅವರು ಅಲ್ಪ ಕಾಲದ‌ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ.
ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಆರಂಭದಿಂದಲೂ ಸಕ್ರಿಯರಾಗಿದ್ದ ಸುಂದರ ಗೌಡ ಅವರು ಜಿಲ್ಲಾ ಪಂಚಾಯತು ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು ದಶಕಗಳ ಕಾಲ ಉಜಿರೆ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಇವರು ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಜವಾಬ್ದಾರಿ ಗಳನ್ನು ನಿರ್ವಹಿಸಿದ್ದರು.

error: Content is protected !!