ಮಹಾಲಕ್ಷ್ಮಿ ಭೀಕರ ಹತ್ಯೆ ಪ್ರಕರಣ: ಕೊಲೆಗೂ ಮುನ್ನ ನಡೆದಿದ್ದೇನು..?: ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದೇಕೆ..?

ಬೆಂಗಳೂರು: ಮಹಾಲಕ್ಷ್ಮಿ ಭೀಕರ ಹತ್ಯೆ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಆರೋಪಿಯ ಹುಡುಕಾಟದ ಹೊತ್ತಲ್ಲೆ ಆತ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದನು. ಬೆಂಗಳೂರು ಪೊಲೀಸರು ಕೊಲೆ ಹಿಂದಿನ ಕಾರಣವನ್ನು ಪತ್ತೆ ಹಚ್ಚಿದ್ದಾರೆ. ಆತ ಆಕೆಯನ್ನು ಕೊಲೆ ಮಾಡಿದ್ದು ಏಕೆ? ಆಕೆಯ ದೇಹವನ್ನು ತುಂಡರಿಸಿದ್ದು ಏಕೆ? ಎಂಬ ಪ್ರಶ್ನೆಗಳಿಗೆ ತನಿಖೆಯಲ್ಲಿ ಉತ್ತರ ಸಿಕ್ಕಿದೆ.

ಮಹಾಲಕ್ಷ್ಮೀ 8 ತಿಂಗಳ ಹಿಂದೆ ಪತಿಯ ಜೊತೆ ಜಗಳವಾಡಿ, ನೆಲಮಂಗಲ ಬಿಟ್ಟು ಬೆಂಗಳೂರಿಗೆ ಬಂದು ನೆಲೆಸಿ, ಕೆಲಸಕ್ಕೆ ಸೇರಿದ್ದಳು. ಮಹಾಲಕ್ಷ್ಮೀ ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಮುಕ್ತಿರಂಜನ್ ರಾಯ್ ಫ್ಲೋರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದನು. ದಿನಗಳು ಕಳೆದಂತೆ ಇಬ್ಬರು ಸ್ನೇಹಿತರಾಗಿ, ಕ್ರಮೇಣ ಈ ಸ್ನೇಹ ಪ್ರೀತಿಗೆ ತಿರುಗಿದೆ. ಮುಕ್ತಿರಂಜನ್ ರಾಯ್ ಒಮ್ಮೊಮ್ಮೆ ಮಹಾಲಕ್ಷ್ಮಿಯನ್ನು ಮನೆವರೆಗು ಬಿಟ್ಟು ಹೋಗುತ್ತಿದ್ದನು. ಆದರೆ, ಮಹಾಲಕ್ಷ್ಮೀ ಮಾತ್ರ ತನಗೆ ಈಗಾಗಲೆ ಒಂದು ಮದುವೆಯಾಗಿರುವ ಮತ್ತು ಮಗು ಇರುವ ಬಗ್ಗೆ ಮುಕ್ತಿರಂಜನ್ ರಾಯ್‌ಗೆ ಹೇಳಿರಲಿಲ್ಲ. ಮುಕ್ತಿರಂಜನ್ ರಾಯ್ ಮದುವೆ ಪ್ರಸ್ತಾಪವನ್ನು ಮಹಾಲಕ್ಷ್ಮೀ ಮುಂದೆ ಇಟ್ಟಿದ್ದಾನೆ. ಮಹಾಲಕ್ಷ್ಮಿಯೂ ಈ ಮದುವೆಗೆ ಒಪ್ಪಿಕೊಂಡಿದ್ದಾಳೆ.

ಮುಕ್ತಿರAಜನ್ ರಾಯ್‌ಗೆ ಇಬ್ಬರು ಸಹೋದರರು ಇದ್ದಾರೆ. ಓರ್ವ ಬೆಂಗಳೂರಿನ ಹೆಬ್ಬಗೋಡಿಯಲ್ಲಿ ಮುಕ್ತಿರಂಜನ್ ರಾಯ್ ಜೊತೆಗೆ ವಾಸವಾಗಿದ್ದನು. ಮತ್ತೋರ್ವ ಒಡಿಶಾದ ಗಂಜAನಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾನೆ. ಈ ಇಬ್ಬರು ತಮ್ಮಂದಿರ ಬಳಿಯೂ ತಾನು ಮದುವೆ ಆಗುತ್ತಿರುವ ಬಗ್ಗೆ ಹೇಳಿದ್ದಾನೆ.

ದಿನ ಕಳೆದಂತೆ ಮುಕ್ತಿರಂಜನ್‌ಗೆ ಮಹಾಲಕ್ಷ್ಮೀ ನಡವಳಿಕೆ ಮೇಲೆ ಅನುಮಾನ ಹುಟ್ಟಿದೆ. ಮಹಾಲಕ್ಷ್ಮೀ ಬೇರೆ ಯುವಕನ ಜೊತೆಗೆ ಸಂಪರ್ಕ ಹೊಂದಿದ್ದಾಳೆ ಎಂದು ಅನುಮಾನಗೊಂಡು, ಒಂದು ದಿನ ಆಕೆಯ ಮೊಬೈಲ್ ಪರಿಶೀಲನೆ ಮಾಡಿದಾಗ, ಆಕೆಗೆ ಮದುವೆಯಾಗಿ ಮಗು ಇರುವ ವಿಚಾರ ಗೊತ್ತಾಗಿದೆ. ಈ ಎಲ್ಲ ವಿಚಾರ ಗೊತ್ತಾದ ಬಳಿಕ ಮುಕ್ತಿರಂಜನ್ ರಾಯ್ ಮಹಾಲಕ್ಷ್ಮಿಯಿಂದ ಅಂತರ ಕಾಯ್ದುಕೊಂಡಿದ್ದಾನೆ. ನಂತರ, ತಾನು ಕೆಲಸ ಮಾಡುವ ಕಂಪನಿಯಲ್ಲೇ ಬೇರೆ ಯುವತಿಯ ಜೊತೆ ಮುಕ್ತಿರಂಜನ್ ರಾಯ್ ಸ್ನೇಹ ಬೆಳಸಿದ್ದಾನೆ. ಇದನ್ನು ಕಂಡ ಮಹಾಲಕ್ಷ್ಮೀ ಆ ಯುವತಿ ಜೊತೆ ಜಗಳವಾಡಿ ಇನ್ಮೇಲೆ ಮುಕ್ತಿರಂಜನ್ ಜೊತೆ ಮಾತನಾಡದಂತೆ ಎಚ್ಚರಿಕೆ ನೀಡಿದ್ದಾಳೆ.

ಮಹಾಲಕ್ಷ್ಮೀಗೆ ಮದುವೆಯಾದ ವಿಚಾರ ತಿಳಿದ ಬಳಿಕ ಮುಕ್ತಿರಂಜನ್ ರಾಯ್ ನಾನು ನಿನ್ನ ಮದುವೆ ಆಗಲ್ಲ ಎಂದು ಹೇಳಿದ್ದಾನೆ. ಆಗ ಮಹಾಲಕ್ಷ್ಮೀ ನನ್ನ ಪತಿಗೆ ವಿಚ್ಛೇದನ ನೀಡುತ್ತೇನೆ, ಒಂದು ವೇಳೆ ನೀನು ನನ್ನ ಮದುವೆ ಆಗಿಲ್ಲ ಅಂದ್ರೆ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಮುಕ್ತಿರಂಜನ್ ರಾಯ್‌ಗೆ ಬೆದರಿಕೆ ಹಾಕಿದ್ದಾಳೆ. ಇಷ್ಟೆಲ್ಲ ಆದ ಬಳಿಕ ಇಬ್ಬರೂ ಕೂತು ಮಾತನಾಡಿ ಕಾಂಪ್ರಮೈಸ್ ಆಗಿ ಇನ್ಮುಂದೆ ಚೆನ್ನಾಗಿ ಇರೋಣ ಅಂತ ನಿರ್ಧಾರಕ್ಕೆ ಬಂದಿದ್ದರು.

ಅAದು ರಾತ್ರಿ ಮಹಾಲಕ್ಷ್ಮಿ ಮುಕ್ತಿರಂಜನ್ ಜೊತೆಗೆ ಉಳಿದುಕೊಂಡಿದ್ದಾಳೆ. ಮರುದಿನ ಇಬ್ಬರೂ ವಾಪಾಸ್ ವೈಯಾಲಿಕಾವಲ್ ಮಹಾಲಕ್ಷ್ಮಿ ರೂಮ್‌ಗೆ ಬಂದಿದ್ದಾರೆ. ಅಂದು ರಾತ್ರಿ ಮತ್ತೆ ಇಬ್ಬರ ಮಧ್ಯೆ ಜಗಳವಾಗಿದೆ. ಜಗಳದ ನಡುವೆ ಮಹಾಲಕ್ಷ್ಮಿ ಆರೋಪಿ ಮುಕ್ತಿರಂಜನ್ ರಾಯ್‌ಗೆ ಹೊಡೆದಿದ್ದಾಳೆ. ಇದರಿಂದ ಸಿಟ್ಟಾದ ಮುಕ್ತಿರಂಜನ್ ಆಕೆಯ ಮುಖಕ್ಕೆ ಹೊಡೆದಿದ್ದಾನೆ. ಪರಿಣಾಮ ಮಹಾಲಕ್ಷ್ಮೀ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಬಳಿಕ ಮುಕ್ತಿರಂಜನ್ ರಾಯ್ ಮಹಾಲಕ್ಷ್ಮಿ ಮುಖದ ಮೇಲೆ ದಿಂಬು ಇಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಹೇಗೆ ಪಾರಾಗುವುದು ಎಂದು ಯೋಚಿಸಿದ್ದಾನೆ. ಮೃತದೇಹ ಹೀಗೆ ಬಿಟ್ಟರೆ ವಾಸನೆ ಬರುತ್ತೆ ಅಂತ ಯೋಚಿಸಿ, ಮಚ್ಚು ಖರೀದಿಸಿ, 57 ತುಂಡು ಮಾಡಿ ಫ್ರಿಡ್ಜ್ನಲ್ಲಿ ಇಟ್ಟಿದ್ದಾನೆ. ಬಳಿಕ ವಾಶ್ ರೂಮ್‌ನಲ್ಲಿ ಆಸಿಡ್ ಹಾಕಿ ರಕ್ತದ ಕಲೆಗಳನ್ನು ಸ್ವಚ್ಛ ಮಾಡಿದ್ದಾನೆ. ಮಧ್ಯರಾತ್ರಿ ಅಷ್ಟೊತ್ತಿಗೆ ಇಷ್ಟೆಲ್ಲ ಮಾಡಿ ಮುಗಿಸಿದ್ದನು.

ಬೆಳಗಾಗುತ್ತಿದ್ದಂತೆ ಹೆಬ್ಬಗೋಡಿಯ ತನ್ನ ರೂಮ್‌ಗೆ ವಾಪಾಸ್ ಹೋಗಿ ತನ್ನ ತಮ್ಮನಿಗೆ ತಕ್ಷಣವೇ ರೂಮ್ ಖಾಲಿ ಮಾಡಿಕೊಂಡು ಬೇರೆ ಕಡೆ ಹೋಗು, ತಾನು ಮಹಾಲಕ್ಷ್ಮಿಯನ್ನು ಕೊಲೆ ಮಾಡಿ ಬಂದಿದ್ದೀನಿ ಎಂದು ಹೇಳಿದ್ದಾನೆ. ತಮ್ಮನ ಬಳಿ ಇದ್ದ ಹಣ ತೆದುಕೊಂಡು ಬೈಕ್‌ನಲ್ಲಿ ಊರಿನತ್ತ ಪ್ರಯಾಣ ಬೆಳಸಿದ್ದಾನೆ. ಊರಿಗೆ ಹೋದ ಬಳಿಕ ತಾಯಿಯ ಬಳಿ ತಾನು ಕೊಲೆ ಮಾಡಿರುವ ವಿಚಾರ ತಿಳಿಸಿದ್ದಾನೆ. ಆಗ ತಾಯಿ ಗಂಜAನಲ್ಲಿ ಇರುವ ತಮ್ಮನ ಜೊತೆಗೆ ಹೋಗಿ ಇರುವಂತೆ ಸಲಹೆ ನೀಡಿದ್ದಾಳೆ. ತಾಯಿಯ ಸಲಹೆಯಂತೆ ವಿದ್ಯಾಭ್ಯಾಸ ಮಾಡುತ್ತಿದ್ದ ತಮ್ಮನ ರೂಮ್ ಸೇರಿಕೊಂಡಿದ್ದಾನೆ.

ತಮ್ಮನ ಮೊಬೈಲ್‌ನಲ್ಲಿ ಪ್ರತಿದಿನ ಕನ್ನಡ ನ್ಯೂಸ್ ಚಾನಲ್ ಲೈವ್ ನೋಡುತ್ತಿದ್ದ ಇವನಿಗೆ ಮಹಾಲಕ್ಷ್ಮಿ ಕೊಲೆ ವಿಚಾರ ಚಾನಲ್‌ಗಳಲ್ಲಿ ಬಂದಾಗ ಆತಂಕ ಪಟ್ಟಿದ್ದನು. ತನಿಖಾ ತಂಡಗಳು ಆಂಧ್ರ, ಪಶ್ಚಿಮ ಬಂಗಾಳ ಮೊದಲಾದ ಕಡೆ ಹುಡುಕಾಟ ನಡೆಸ್ತಿರುವ ವಿಚಾರ ಗೊತ್ತಾಗಿ ಇನ್ನು, ಪೊಲೀಸರ ಕೈಗೆ ತಾನು ಸಿಕ್ಕಿಹಾಕಿಕೊಳ್ಳುತ್ತೇನೆ, ತಪ್ಪಿಸಿಕೊಳ್ಳಲು ಆಗಲ್ಲ ಅಂತ ಅರಿವಾಗಿ, ಗಂಜAನಿAದ ದ್ವಿಚಕ್ರ ವಾಹನದಲ್ಲಿ ವಾಪಾಸ್ ಭದ್ರಕ್‌ಗೆ ಬಂದಿದ್ದಾನೆ. ಬಳಿಕ, ಊರ ಹೊರಭಾಗದಲ್ಲಿ ಡೆತ್ ನೋಟ್ ಬರೆದಿಟ್ಟು ಮುಕ್ತಿರಂಜನ್ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ವಿಚಾರಗಳು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.

error: Content is protected !!