ಕುದ್ರೋಳಿ: ದಸರಾ ವೈಭವಕ್ಕೆ ವರುಣಾಗಮನ: ಸಿಡಿಲು- ಮಿಂಚಿನ ಆರ್ಭಟ: ಬೆಚ್ಚಿಬಿದ್ದ ಭಕ್ತಾಧಿಗಳು..!

ಮಂಗಳೂರು: ವೈಭವದ ಮಂಗಳೂರು ದಸರಾ ಹಬ್ಬಕ್ಕೆ ಭಾರೀ ವರುಣಾಗಮನವಾಗಿದೆ.

ಅ.6 ಭಾನುವಾರದಂದು ರಜಾ ದಿನವಾಗಿದ್ದರಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ವಿದ್ಯುತ್ ದೀಪಾಲಂಕಾರ ವೀಕ್ಷಣೆಗಾಗಿ ಭಕ್ತಾಧಿಗಳು ಕಾದು ಕುಳಿತ್ತಿದ್ದರು. ಆದರೆ ಸಂಜೆ ಸುಮಾರು 06 ಗಂಟೆ ವೇಳೆಗೆ ಒಂದೇ ಸಮನೆ ಮಳೆಸುರಿದಿದ್ದು ಗುಡುಗು, ಮಿಂಚಿನ ಆರ್ಭಟಕ್ಕೆ ಭಕ್ತಾಧಿಗಳು ಬೆಚ್ಚಿಬಿದ್ದಿದ್ದಾರೆ.

ರಾತ್ರಿ ಹೊತ್ತು ದೇವಾಲಯದ ಸೌಂದರ್ಯ ಕಣ್ತುಂಬಿಕೊಳ್ಳಲು ಭಕ್ತಾಧಿಗಳಿಗೆ ಮಳೆ ಅಡೆಚಣೆಯಾಗಿದ್ದು, ದೂರದ ಊರುಗಳಿಂದ ಬಂದ ಭಕ್ತಾಧಿಗಳು ಬೇಸರ ವ್ಯಕ್ತಪಡಸಿದ್ದಾರೆ.

error: Content is protected !!