“ನಂದಿನ ಹಾಲಿನ ದರ ಹೆಚ್ಚಳ ಮಾಡುತ್ತೇವೆ”: ಸಿಎಂ ಸಿದ್ದರಾಮಯ್ಯ ಘೋಷಣೆ

ರಾಮನಗರ: ನಂದಿನ ಹಾಲಿನ ದರ ಹೆಚ್ಚಳ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಮಾಗಡಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಹೆಚ್ಚಳ ಮಾಡುತ್ತೇವೆ. ಹೆಚ್ಚಳ ಮಾಡಿದ ಹಾಲಿನ ದರ ರೈತರಿಗೆ ಹೋಗಬೇಕು” ಎಂದು ಹೇಳಿದ್ದಾರೆ.

ಈಗಾಗಲೆ ಹಾಲಿನ ದರ 2ರೂ ಹೆಚ್ಚಳವಾಗಿದ್ದು ಜೊತೆಗೆ 50ಎಂಎಲ್ ಹಾಲು ಕೂಡ ಹೆಚ್ಚುವರಿಯಾಗಿ ಪ್ಯಾಕೆಟ್ ತುಂಬಿದೆ. ಆದರೆ ಸಿಎಂ ಸದ್ಯ ಘೊಷಣೆ ಮಾಡಿರುವ ಹಾಲಿನ ದರ ಹೆಚ್ಚಳದಲ್ಲಿ ಕೇವಲ ದರ ಮಾತ್ರ ಹೆಚ್ಚಳವಾಗಿಲಿದೆಯೇ? ಅಥವ ಹಾಲಿನ ಪ್ರಮಾಣವೂ ಹೆಚ್ಚವರಿಯಾಗಲಿದೆಯೇ? ಎಂಬುದನ್ನು ಕಾದುನೊಡಬೇಕಿದೆ.

error: Content is protected !!