ದೊಂಡೊಲೆ, ನೇಣು ಬಿಗಿದುಕೊಂಡು  ವ್ಯಕ್ತಿ ಆತ್ಮಹತ್ಯೆ:

 

 

 

ಬೆಳ್ತಂಗಡಿ: ವ್ಯಕ್ತಿಯೊಬ್ಬರು ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ13 ರಂದು ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ದೊಂಡೊಲೆಯಲ್ಲಿ ನಡೆದಿದೆ. ಧರ್ಮಸ್ಥಳದಲ್ಲಿ ಅಂಗಡಿ ನಡೆಸುತಿದ್ದ ದೊಂಡೊಲೆಯ
ಪುಂಡಲೀಕ ಪ್ರಭು (64 )ಎಂಬವರು ಶುಕ್ರವಾರ ಮಧ್ಯಾಹ್ನ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಧರ್ಮಸ್ಥಳ ದೇಗುಲದ ಮುಂಭಾಗದಲ್ಲಿ ಕಳೆದ ಏಳೆಂಟು ದಶಕಗಳಿಂದ ಹೋಟೆಲ್ ಹಾಗೂ ತಂಪು ಪಾನೀಯಗಳ ಅಂಗಡಿ ನಡೆಸುತ್ತಿದ್ದ ಕುಟುಂಬದವರಾಗಿದ್ದು ಇವರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆತ್ಮಹತ್ಯೆಗೆ ಕಾರಣ ತಿಳಿದು ಬರಬೇಕಾಗಿದೆ.

error: Content is protected !!