ಇಳಂತಿಲ: ಕೆಸರುಮಯ ರಸ್ತೆಯಲ್ಲಿ ಶಾಲಾ ಮಕ್ಕಳ ಪರದಾಟ: ರಸ್ತೆ ದುರಸ್ಥಿಗೊಳಿಸುವಂತೆ ಎಸ್ ಡಿಎಂಸಿ ಅಧ್ಯಕ್ಷರಿಂದ ಪಂಚಾಯತ್‌ಗೆ ಮನವಿ

ಬೆಳ್ತಂಗಡಿ: ಕಾಯರ್ಪಾಡಿಯಿಂದ ಕನ್ಯಾರಕೋಡಿವರೆಗೆ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಶಾಲಾ ಮಕ್ಕಳಿಗೆ ನಡೆದುಕೊಂಡು ಹೋಗಲು ಅಸಾಧ್ಯವಾಗುತ್ತಿದೆ. ಈ ಹಿನ್ನಲೆ ರಸ್ತೆ ದುರಸ್ಥಿಗೊಳಿಸುವಂತೆ ಇಳಂತಿಲ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು ಇಳಂತಿಲ ಗ್ರಾಮ ಪಂಚಾಯತ್‌ಗೆ ಮನವಿ ನೀಡಿದ್ದಾರೆ.

ಕೆಸರುಮಯ ರಸ್ತೆ ಮಾತ್ರವಲ್ಲದೆ ಚರಂಡಿ ವ್ಯವಸ್ಥೆಯೂ ಹದಗೆಟ್ಟಿದ್ದು ರಸ್ತೆ ಮೇಲೆ ನೀರು ಹರಿದು ಹೋಗುತ್ತಿದೆ. ಈ ರಸ್ತೆ ಮೂಲಕ ಸಾಗುವ ಸಾರ್ವಜನಿಕರು, ಶಾಲಾ ಮಕ್ಕಳು ಭಾರೀ ತೊಂದರೆ ಅನುಭವಿಸುತ್ತಿದ್ದು ಶೀಘ್ರದಲ್ಲಿ ರಸ್ತೆ ದುರಸ್ಥಿಗೊಳಿಸುವಂತೆ ಮನವಿ ಸಲ್ಲಿಸಿದ್ದಾರೆ.

error: Content is protected !!