ಕಾರಿನಿಂದ ನಗದು ಸೇರಿದಂತೆ 15 ಪವನ್ ಚಿನ್ನಾಭರಣ ದೋಚಿದ ಕಳ್ಳರು..!: ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು:

 

 

 

ಬೆಳ್ತಂಗಡಿ: ನಿಲ್ಲಿಸಿದ ಕಾರಿನಿಂದ ನಗದು ಸೇರಿದಂತೆ 88 ಗ್ರಾಂ ಚಿನ್ನಾಭರಣ ಕಳವುಗೈದ ಘಟನೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಚಿಬಿದ್ರೆ ಗ್ರಾಮದ ಅಬ್ದುಲ್ ಜಲೀಲ್ ಎಂಬವರು ತನ್ನ ತಂಗಿ ಹಾಗೂ ಹೆಂಡತಿ ಮಕ್ಕಳೊಂದಿಗೆ ಕಾರಿನಲ್ಲಿ ಪ್ರಯಾಣ ಮಾಡಿ ಲಾಯಿಲ ಸಮೀಪ ಕಾರು ನಿಲ್ಲಿಸಿ ಹೊರ ಹೋದ ಸಂದರ್ಭ ಕಾರಿನಲ್ಲಿದ್ದ ನಗದು 1500 ರೂ   ಹಾಗೂ 3,34,400 ರೂ ಮೌಲ್ಯದ ಚಿನ್ನಾಭರಣ ಮಕ್ಕಳ ಬಟ್ಟೆ ಇದ್ದ ಬ್ಯಾಗನ್ನು ಯಾರೋ ಕಳ್ಳರು ಕಳ್ಳತನ ಗೈದಿರುವ ಬಗ್ಗೆ ಬೆಳ್ತಂಗಡಿ ಠಾಣೆಗೆ ಅಬ್ದುಲ್ ಜಲೀಲ್ ದೂರು ನೀಡಿದ್ದಾರೆ.ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತಿದ್ದಾರೆ.

error: Content is protected !!