ಕಾಂಗ್ರೆಸ್ ಸೋಲು-ಗೆಲುವಿನ ಪರಾಮರ್ಶೆಗಾಗಿ ಸಮಿತಿ ರಚನೆ: ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ತಂಡ: ಇಂದು ಬೆಳ್ತಂಗಡಿಯಲ್ಲಿ ಪರಾಮರ್ಶೆ ಸಭೆ

ಬೆಳ್ತಂಗಡಿ: ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ವಿವಿಧ ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಸೋಲು-ಗೆಲುವಿನ ಕುರಿತು ಪರಾಮರ್ಶೆ ನಡೆಸಲು ಕಾಂಗ್ರೆಸ್ ‘ಪಕ್ಷದ ಸೋಲಿಗೆ ಕಾರಣವಾದ ಪರಾಮರ್ಶೆ ಸಮಿತಿ ರಚಿಸಿದ್ದು, ಇಂದು ಬೆಳ್ತಂಗಡಿಯಲ್ಲಿ ಈ ಸಮಿತಿ ಕಾಂಗ್ರೆಸ್ ಸೋಲಿನ ಬಗ್ಗೆ ವಿಮರ್ಶಿಸಲಿದೆ.


ಮಧ್ಯಾಹ್ನ 02:30ಯಿಂದ ಪರಾಮರ್ಶೆ ನಡೆಯಲಿದ್ದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮಾಜಿ ಶಾಸಕರು, ವಿವಿಧ ಎಲ್ಲಾ ಮುಂಚೂಣಿ ಘಟಕಗಳ ಅಧ್ಯಕ್ಷರು, ಕೆಪಿಸಿಸಿ, ಡಿಸಿಸಿಯ ಎಲ್ಲಾ ಪದಾಧಕಾರಿಗಳು, ತಾಲೂಕು ಮಟ್ಟದ ಹಾಗೂ ಜಿಲ್ಲಾ ಮಟ್ಟದ ಜನಪತ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಜು.15ರಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಹಾಗೂ ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಪರಾಮರ್ಶೆ ಸಭೆ ನಡೆಯಲಿದೆ.

error: Content is protected !!