ಅಮಿತ್ ಷಾರಿಗೆ ಹಸಿ ತೇಪೆಯೊಂದಿಗೆ ಪುತ್ತೂರಿಗೆ ಸ್ವಾಗತ: ಇಂದು ಹಸಿ ತೇಪೆಯೊಂದಿಗೆ ಹೊಂಡಗಳಿಗೆ ತಾತ್ಕಾಲಿಕ ಮುಕ್ತಿ!: ದೆಹಲಿಗೆ ತಲುಪುವ ಮುನ್ನ ಕಿತ್ತುಹೋಗದಿರಲಿ ಎಂಬುದು ಸಾರ್ವಜನಿಕರ ಪ್ರಾರ್ಥನೆ!

ಪುತ್ತೂರು: ಕೇಂದ್ರದಿಂದ ಗಣ್ಯವ್ಯಕ್ತಿಗಳು, ಸಚಿವರು ಜಿಲ್ಲೆಗಳಿಗೆ ಬರುತ್ತಿದ್ದಾರೆ ಎಂದ ತಕ್ಷಣ ರಸ್ತೆಗಳಿಗೆ ತೇಪೆ ಹಚ್ಚುತ್ತಾರೆ. ನಾಳೆ ಅಮಿತ್ ಷಾ ಪುತ್ತೂರಿಗೆ ಆಗಮಿಸಲಿದ್ದು, ಇಂದು ದರ್ಬೆ ಸುತ್ತ ಮುತ್ತ ತೇಪೆ ಹಚ್ಚುವ ಕಾರ್ಯ ನಡೆದಿದೆ. ಒಂದರ್ಥದಲ್ಲಿ ಅಮಿತ ಷಾರಿಗೆ  ಹಸಿ ತೇಪೆಯ ಸ್ವಾಗತ ಲಭಿಸಲಿದೆ.


ವಿಪರ್ಯಾಸವೆಂದರೆ ತೇಪೆ ಹಾಕಿದರೂ ಎಷ್ಟು ದಿನ ಉಳಿಯಲಿದೆ ಎಂಬುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ. ಪುತ್ತೂರಿನ ಹನುಮಗಿರಿಯ ದೇವಾಲಯಕ್ಕೆ ಬಳಿಕ ಕ್ಯಾಂಪ್ಕೋ ಕಾರ್ಯಕ್ರಮಕ್ಕೆ ಪುತ್ತೂರಿಗೆ ಫೆ.11ರಂದು ಅಮಿತ್ ಷಾ ಆಗಮಿಸುತ್ತಿರುವ ಕಾರಣ ಹೊಂಡಮಯ ರಸ್ತೆಗಳಿಗೆ ಕಳಪೆ ತೇಪೆಯೊಂದಿಗೆ ತಾತ್ಕಾಲಿಕ ಮುಕ್ತಿ ಸಿಗುತ್ತಿದೆ‌. ಅಮಿತ್ ಷಾ ಪುತ್ತೂರಿಗೆ ಬಂದು ವಾಪಾಸ್ ದಿಲ್ಲಿಗೆ ತಲುಪುವ ವೇಳೆಗೆ ಈ ರಸ್ತೆ ಮತ್ತೆ ಹಿಂದಿನ ಸ್ಥಿತಿಗೆ ತಲುಪದಿದ್ದರೆ ಸಾಕು ಎಂದು ಸಾರ್ವಜನಿಕರ ಪ್ರಾರ್ಥನೆಯಾಗಿದೆ..

error: Content is protected !!