ನಿಡಿಗಲ್ ನೇತ್ರಾವತಿ ನದಿಯಲ್ಲಿ ಹೋರಿ ಕಳೇಬರ ಪತ್ತೆ: ಕಲ್ಮಂಜ, ಮುಂಡಾಜೆ ಪಂಚಾಯತ್, ಸ್ಥಳೀಯರ ಸಹಕಾರದೊಂದಿಗೆ ವಿಲೇವಾರಿ

 

 

 

ಬೆಳ್ತಂಗಡಿ:  ಕಲ್ಮಂಜ ಸಮೀಪದ ನಿಡಿಗಲ್ ನೇತ್ರಾವತಿ ನದಿಯಲ್ಲಿ  ಹೋರಿಯ ಕಳೇಬರ  ನ 23 ಮಂಗಳವಾರ ಪತ್ತೆಯಾಗಿದೆ.
ಸೇತುವೆಯ ಕೆಳಗೆ  ನದಿಯಲ್ಲಿ  ಕಲ್ಲೊಂದರ ನಡುವೆ ಸಿಲುಕಿಕೊಂಡಿದ್ದ ಸುಮಾರು ನಾಲ್ಕರಿಂದ ಐದು ವರ್ಷ ಪ್ರಾಯದ ಜರ್ಸಿ ಜಾತಿಯ ಹೋರಿಯ ಕಳೇಬರ ಸ್ಥಳೀಯರಿಗೆ ಕಂಡುಬಂದಿತ್ತು.  ಈಬಗ್ಗೆ ಕಲ್ಮಂಜ ಹಾಗೂ ಮುಂಡಾಜೆ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಲಾಯಿತು.

 

 

 

ಕಲ್ಮಂಜ ಗ್ರಾಪಂ ಪಿಡಿಒ ಇಮ್ತಿಯಾಜ್, ಮುಂಡಾಜೆ ಗ್ರಾಪಂ ಪಿಡಿಒ ಸುಮಾ ಎ. ಎಸ್., ಹಿರಿಯ ಪಶುವೈದ್ಯ ಪರೀಕ್ಷಕ ನಾಗಶಯನ ರಾವ್ ಹಾಗೂ ಇತರರು ಆಗಮಿಸಿ ಪರಿಶೀಲನೆ ನಡೆಸಿದರು. ಪಂಚಾಯಿತಿಗಳ ವತಿಯಿಂದ ಹೋರಿಯ ಕಳೇಬರವನ್ನು ಸ್ಥಳೀಯರ ಸಹಕಾರದೊಂದಿಗೆ ವಿಲೇವಾರಿ ಮಾಡಲಾಯಿತು.

error: Content is protected !!