ಅಗಲಿದ ಬಂಟರ ಸಂಘದ ನಿರ್ದೇಶಕ ದಯಾನಂದ ಶೆಟ್ಟಿಯವರಿಗೆ ನುಡಿನಮನ ಕಾರ್ಯಕ್ರಮ .

×

 

ಬೆಳ್ತಂಗಡಿ: ಇತ್ತೀಚೆಗೆ ಅಲ್ಪಕಾಲದ ಅನಾರೋಗ್ಯದಿಂದ ಮರಣ ಹೊಂದಿದ ತಾಲೂಕು ಬಂಟರ ಸಂಘದ ನಿರ್ದೆಶಕರಾದ  ದಯಾನಂದ ಶೆಟ್ಟಿ  ಯೈಕುರಿ ಬಳೆಂಜ ಇವರಿಗೆ ಬಂಟರ ಸಂಘದ ವತಿಯಿಂದ ನುಡಿ ನಮನ ಕಾರ್ಯಕ್ರಮ ಬಂಟರ ಸಂಘದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಬಂಟರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಮಾತನಾಡಿ ದಯಾನಂದ ಶೆಟ್ಟಿಯವರು ಎಲ್ಲರಲ್ಲೂ ಆತ್ಮೀಯತೆಯಿಂದ ಮಾತನಾಡುವವರು ಬಡವರ ಬಗ್ಗೆ ಅವರಿಗಿದ್ದ ಕಾಳಜಿ ಮರೆಯಲು ಸಾಧ್ಯವಿಲ್ಲ ಬಂಟರ ಸಂಘದ ಪ್ರತಿಯೊಂದು ಕಾರ್ಯಕ್ರಮದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು ಇವರ ಅಕಾಲಿಕ ಮರಣ ಸಮಾಜಕ್ಕೆ ತುಂಬಲಾರದ ನಷ್ಟ   ಅವರ ಕುಟುಂಬಕ್ಕೆ ದುಃಖ ನೀಗುವ ಶಕ್ತಿ ಭಗವಂತ ನೀಡಲಿ ಎಂದರು .

 

 

ಮಾಜಿ ಅಧ್ಯಕ್ಷರಾದ ಜಯಾರಾಮ ಶೆಟ್ಟಿ ಪಡಂಗಡಿ ನುಡಿನಮನ ಸಲ್ಲಿಸುತ್ತ ಎಲ್ಲ ರೀತಿಯಲ್ಲೂ ಸಂಘದ ಅಭಿವೃದ್ಧಿಯ ಬಗ್ಗೆ ಯೋಚಿಸುವಂತಹ ದೊಡ್ಡ ಮನಸ್ಸಿನ ವ್ಯಕ್ತಿಯನ್ನು ನಾವು ಇಂದು ಕಳೆದುಕೊಂಡಿದ್ದೇವೆ ತಮ್ಮ ಕ್ಯಾಟರಿಂಗ್ ಮೂಲಕ ಜಾತಿ ಬೇಧವಿಲ್ಲದೇ ಅದೆಷ್ಟೋ ಬಡವರಿಗೆ ಉಚಿತವಾಗಿ ಹಾಗೂ ಅತೀ ಕಡಿಮೆ ದರದಲ್ಲಿ ಅಡುಗೆ ತಯಾರಿಸಿಕೊಡುತಿದ್ದರಲ್ಲದೇ ಅರ್ಥಿಕವಾಗಿ ಸಮಸ್ಯೆಯಲ್ಲಿದ್ದವರಿಗೂ ಸಹಾಯ ಹಸ್ತ ಚಾಚುತಿದ್ದರು ಬಂಟರ ಸಂಘದ ಬಗ್ಗೆ ಅತಿಯಾದ ಒಲವು ಹೊಂದಿದ ಇವರು ತನ್ನ ಮನೆಯೆಂದೇ ಭಾವಿಸಿದ್ದರು ಎಂದರು. ಈ ಸಂದರ್ಭದಲ್ಲಿ ಜಯಂತ ಶೆಟ್ಟಿ ಕುಂಠಿನಿ, ರಘುರಾಮ ಶೆಟ್ಟಿ ಉಜಿರೆ, ರಾಜು ಶೆಟ್ಟಿ ಬೆಂಗೆತ್ಯಾರ್, ಉಮೇಶ್ ಶೆಟ್ಟಿ ಉಜಿರೆ, ವಸಂತ ಶೆಟ್ಟಿ “ಶ್ರದ್ಧಾ” ಶಾರೀಕ ಡಿ. ಶೆಟ್ಟಿ ಧರ್ಮಸ್ಥಳ, ಕಿರಣ್ ಕುಮಾರ್ ಗುರುವಾಯನಕೆರೆ, ಸುಜಯ್ ಶೆಟ್ಟಿ, ಆಶಾಲತಾ ಗುರುವಾಯನಕೆರೆ ಇವರುಗಳು ನುಡಿ ನಮನ ಸಲ್ಲಿಸಿದರು. ಕೋವಿಡ್ ನಿಯಮವಾಳಿಯಂತೆ ನಡೆದ ಸರಳ ಕಾರ್ಯಕ್ರಮದಲ್ಲಿ ತಾಲೂಕು ಬಂಟರ ಸಂಘದ ನಿರ್ದೆಶಕರು ಉಪಸ್ಥಿತರಿದ್ದರು.

error: Content is protected !!