ಗೋವಿಂದೂರು ಹೀರ್ಯಾ ರಸ್ತೆ  ಕಾಮಗಾರಿ ವೀಕ್ಷಣೆ ಮಾಡಿದ ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಕಳಿಯ ಗ್ರಾಮದ ಗೋವಿಂದೂರು ಹೀರ್ಯ ರಸ್ತೆಗೆ ಶಾಸಕರ ನಿಧಿಯಿಂದ ಮಂಜೂರಾದ 10 ಲಕ್ಷ ರೂ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಗತ್ಯ ಸಲಹೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಕಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಭಾಷಿಣಿ ಜನಾರ್ದನ ಗೌಡ, ಉಪಾಧ್ಯಕ್ಷೆ ಕುಸುಮ ಬಂಗೇರ, ಸದಸ್ಯರಾದ ದಿವಾಕರ ಎಂ., ಸುಧಾಕರ ಮಜಲು, ವಿಜಯ ಗೌಡ ಕಲಾಯಿತೊಟ್ಟು, ಯಶೋಧರ ಶೆಟ್ಟಿ, ಕಳಿಯ ಸಿಎ ಬ್ಯಾಂಕ್ ಅಧ್ಯಕ್ಷ ವಸಂತ ಮಜಲು, ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜನಾರ್ದನ ಗೌಡ, ಗೋವಿಂದೂರು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಭವ್ಯಾ, ಪ್ರಮುಖರಾದ ಸೋಮಪ್ಪ ಗೌಡ, ದಿನೇಶ್ ಪೂಜಾರಿ, ರಾಜೇಶ್ ಪೆಂರ್ಬುಡ, ದಯಾರಾಜ್ ಕೆ.ಪಿ., ವಿಲಿಯಂ ಪೆರ್ನಾಂಡೀಸ್, ಆದರ್ಶ್ ಕೊರೆಯ, ಯೋಗೀಶ್ ಭಂಡಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಮುಖ್ಯ ಶಿಕ್ಷಕಿ ಮೊದಲಾದವರು ಇದ್ದರು

error: Content is protected !!