ಶೌಚಾಲಯದಲ್ಲಿ ಸಿಲುಕಿದ್ದ ಚಿರತೆ ಪರಾರಿ: ಅರಣ್ಯ ಇಲಾಖೆ ಕಾರ್ಯಾಚರಣೆ ವಿಫಲ: ಸಾರ್ವಜನಿಕರ ‌ಕಿಡಿ

ಕಡಬ: ನಾಯಿಯೊಂದಿಗೆ ಚಿರತೆ ಶೌಚಾಲಯದಲ್ಲಿ ಬಂಧಿಯಾಗಿದ್ದ ಘಟನೆ‌ ಸುಬ್ರಹ್ಮಣ್ಯ ಬಳಿ ನಡೆದಿತ್ತು. ಈ ಮೂಲಕ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ವಿಫಲವಾಗಿದ್ದಾರೆ.

ಸುಬ್ರಹ್ಮಣ್ಯ ಸಮೀಪ ಕೈಕಂಬ ನಿವಾಸಿ ರೇಗಪ್ಪ ಎಂಬವರ ಮನೆಯ ಸಮೀಪ ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆ ಚಿರತೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಶೌಚಾಲಯದಲ್ಲಿ ನಾಯಿಯೊಂದಿಗೆ ಬಂಧಿಯಾಗಿತ್ತು. ನಾಯಿ ಮತ್ತು ಚಿರತೆ ಎರಡೂ ಶೌಚಾಲಯದ ಒಳಗೆ ಬಂಧಿಯಾಗಿದ್ದ ಫೋಟೊ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿತ್ತು.

ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಚಿರತೆ ಸೆರೆಹಿಡಿಯಲು ಯತ್ನಿಸಿದ್ದು, ಚಿರತೆ ತಪ್ಪಿಸಿಕೊಂಡು ಕಾಡಿನತ್ತ ಓಡಿ ಪರಾರಿಯಾಗಿದೆ.

ಘಟನೆಯಿಂದ ಸ್ಥಳೀಯರು ಮತ್ತಷ್ಟು ಆತಂಕದಲ್ಲಿದ್ದು, ಸೆರೆಸಿಕ್ಕ ಚಿರತೆಯನ್ನೂ ಬಂಧಿಸಲಾಗದ ಇಲಾಖೆ ಸಿಬ್ಬಂದಿ ವಿರುದ್ಧ ಕಿಡಿಕಾರಿದ್ದಾರೆ.

error: Content is protected !!