ದೇಶಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸೈನಿಕ ಯತೀಂದ್ರ

ಬೆಳ್ತಂಗಡಿ: ಕಡಿರುದ್ಯಾವರ ಮಠ ಹೊಸಮನೆ ರಮಣಿ ಮತ್ತು ಜಗದೀಶ್ ಪೂಜಾರಿ ದಂಪತಿ ಪುತ್ರ ಯತೀಂದ್ರ ಪೂಜಾರಿ ಅವರು 17 ವರ್ಷಗಳ ಕಾಲ ಭಾರತೀಯ ಭೂ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು.

ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 2004ರಲ್ಲಿ ಸೇನೆ ಸೇರಿದ್ದರು‌. ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ್, ಅಸ್ಸಾಂ,‌ ರಾಜಸ್ಥಾನ, ದೆಹಲಿ, ಪಂಜಾಬ್‌ ಮತ್ತು ಬೆಂಗಳೂರು ಮೊದಲಾದ ಪ್ರದೇಶಗಳಲ್ಲಿ ದೇಶಸೇವೆ ಮಾಡಿದ್ದಾರೆ.

ಪ್ರಾಥಮಿಕ ಶಿಕ್ಷಣವನ್ನು ಸ್ವ-ಗ್ರಾಮದಲ್ಲಿ ಪೂರೈಸಿ, ವೇಣೂರಿನಲ್ಲಿ ಐಟಿಐ ಶಿಕ್ಷಣ ಪಡೆದಿದ್ದರು.

ಯತೀಂದ್ರ ಅವರಿಗೆ ಜಯಚಿತ್ರಾ ಹಾಗೂ ರಾಜಶ್ರೀ ಎಂಬ ಇಬ್ಬರು ಸಹೋದರಿಯರಿದ್ದು, ವಿವಾಹಿತರಾಗಿದ್ದಾರೆ. ಇವರ ಸಹೋದರ ಯತೀಶ್ ಹೆಚ್.ಜೆ. ಅವರು ಪ್ರಗತಿಪರ ಕೃಷಿಕರಾಗಿದ್ದಾರೆ.

error: Content is protected !!