ಮತ್ತೆ ಅಫ್ರಿಕನ್ ಬಸವನ ಹುಳು‌ಗಳ ಕಾಟ: ಸಂಕಷ್ಟದಲ್ಲಿ ಉರುವಾಲು ಪರಿಸರ ಕೃಷಿಕರು

ಬೆಳ್ತಂಗಡಿ: ಉರುವಾಲು ಸಮೀಪದ ಕೃಷಿಕರು ಹೇಳತಿರದ ಸಂಕಷ್ಟದಲ್ಲಿ ಪರದಾಡುತ್ತಿದ್ದು, ಕೃಷಿಯನ್ನು ರಕ್ಷಿಸಲು ಪರದಾಡುತಿದ್ದಾರೆ. ಬೆಳೆದ ಬೆಳೆಯನ್ನು ರಕ್ಷಿಸಲು ಜನಪ್ರತಿನಿಧಿಗಳಲ್ಲಿ ಸಂಬಂಧಪಟ್ಟ ಕಚೇರಿ, ಅಧಿಕಾರಿಗಳಲ್ಲಿ ಗೋಳಾಡುತ್ತಿದ್ದಾರೆ. ಅದರೆ ಫಲಿತಾಂಶ ‌ಮಾತ್ರ ಶೂನ್ಯ. ಇದರಿಂದ ಕೃಷಿಕರ ಬದುಕು ದುಸ್ಥರವಾಗಿದೆ. ಉರುವಾಲು ಸುತ್ತಮುತ್ತ ಪ್ರದೇಶದ ಕೃಷಿಕರೊಬ್ಬರ ತೋಟದಲ್ಲಿ ಅಫ್ರಿಕನ್ ಬಸವನ ಹುಳು ಕಾಣಿಸಿಕೊಂಡಿದ್ದು, ಇದೀಗ ಕೃಷಿಕರ ಬಾಳನ್ನು ಹಾಳುಗೆಡವುತ್ತಿದೆ. ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸಲಹೆ ಸೂಚಿಸಿದ್ದರೂ‌ ಯಾವುದೇ ಪರಿಣಾಮ ಬೀರುತ್ತಿಲ್ಲ.

error: Content is protected !!