ಉಜಿರೆಯಲ್ಲಿ ಅಪಹರಣ ಪ್ರಕರಣ: ಬಾಲಕನ ಮನೆಗೆ ದ.ಕ. ಎಸ್ಪಿ ಲಕ್ಷ್ಮೀ ಪ್ರಸಾದ್ ಭೇಟಿ

 

ಉಜಿರೆ: ಉಜಿರೆ ರಥಬೀದಿಯಿಂದ ಅಪಹರಣಕ್ಕೋಳಗಾದ ಎಂಟರ ಹರೆಯದ ಬಾಲಕ ಅನುಭವ್ ನ ಮನೆಗೆ ದ.ಕ. ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಡಿ.18 ರಂದು ಭೇಟಿ ನೀಡಿದರು.

ಬಾಲಕನನ್ನು ಅಪಹರಣ ಮಾಡಿದವರು ಡಿ. 17 ರಂದು ರಾತ್ರಿ 17 ಕೋ.ರೂ. ಗೆ ಬೇಡಿಕೆ ಇಟ್ಟಿದ್ದರು. ಡಿ. 18ರಂದು ಬೆಳಗ್ಗೆ ತಮ್ಮ ವರಸೆ ಬದಲಾಯಿಸಿ 10 ಕೋ.ರೂ. ಬೇಡಿಕೆ ಸಲ್ಲಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಹಣಕಾಸಿನ ವಿಚಾರಕ್ಕೆ ಬಾಲಕನನ್ನು ಅಪಹರಿಸಿ, ಒತ್ತೆ ಇಟ್ಟು ಹಣಕ್ಕೆ ಬೇಡಿಕೆ ನೀಡಿರುವ ಕುರಿತು ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ. ಆದರೆ ಬಾಲಕನನ್ನು ಅಪಹರಣ ಮಾಡಿದವರು ಸಾಮಾಜಿಕ ಜಾಲತಾಣದ ಮೂಲಕ ಬಾಲಕನ ತಂದೆಯೊಂದಿಗೆ ಹಣದ ಬೇಡಿಕೆ ಇಡುತ್ತಿರುವುದಾಗಿ ತಿಳಿದು ಬಂದಿದೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಉಜಿರೆಯಲ್ಲಿ ಮೊಕ್ಕಾಂ ಹೂಡಿದ್ದಾರೆ.
ಪ್ರಕರಣ ಸುಖಾಂತ್ಯಕ್ಕಾಗಿ ಪೊಲೀಸರು ಶ್ರಮಿಸುತ್ತಿದ್ದಾರೆ. ದ.ಕ. ಪೊಲೀಸ್ ವರಿಷ್ಠಾಧಿಕಾರಿ‌ ಲಕ್ಷ್ಮೀ ಪ್ರಸಾದ್ ಬಾಲಕ ಮನೆಗೆ ಭೇಟಿ ಮನೆಯವರೊಂದಿಗೆ ಚರ್ಚಿಸಿ, ತನಿಖೆಗೆ ಚುರುಕು ಮುಟ್ಟಿಸಿದ್ದಾರೆ.

ಬಾಲಕನ ಅಪಹರಣ ಪ್ರಕರಣ ಶೀಘ್ರವಾಗಿ ಸುಖ್ಯಾಂತ ಆಗಲಿ ಎಂದು ಪ್ರಜಾ ಪ್ರಕಾಶದ ಹಾರೈಕೆ

error: Content is protected !!