
ಬೆಳ್ತಂಗಡಿ: ಅನುಗ್ರಹ ಇಂಗ್ಲಿಷ್ ಮೀಡಿಯಂ ಸ್ಕೂಲ್ ಉಜಿರೆ ಇದರ ರಕ್ಷಕ ಶಿಕ್ಷಕರ ಸಭೆಯು ಜೂನ್ 20 ಶನಿವಾರ ಅನುಗ್ರಹ ಸಭಾ ಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಗುರುರಾಜ ಡಿ.ಹೆಗ್ಡೆ ಉದ್ಘಾಟಿಸಿ ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಎಂಬ ಮಾತು ಇತ್ತು ಅದರೆ ಮೊಬೈಲ್ ಬಂದ ನಂತರ ಮನೆಯಲ್ಲಿ ಎಲ್ಲರೂ ಅದರಲ್ಲೇ ಹೆಚ್ಚು ಹೊತ್ತು ಕಳೆಯುವುದರಿಂದ ಮಕ್ಕಳ ಮೇಲೆ ನೇರ ದುಷ್ಪರಿಣಾಮ ಬೀರುತ್ತದೆ. ಅದ್ದರಿಂದ ಪೋಷಕರು ಈ ಬಗ್ಗೆ ಎಚ್ಚರಿಕೆಯಿಂದಿರಬೇಕು.ಮಕ್ಕಳ ಸಾಧನೆಯ ಹಿಂದೆ ಶಿಕ್ಷಕರ ಕಠಿಣ ಪರಿಶ್ರಮ ಇದೆ. ಶಿಕ್ಷಕರ ಶ್ರಮವನ್ನು ಅಭಿನಂದಿಸುವುದು ಪೋಷಕರಾದ ನಮ್ಮೆಲ್ಲರ ಕರ್ತವ್ಯ ಅದೇ ರೀತಿ ಮಕ್ಕಳಿಗೂ ಉತ್ತಮ ಸಂಸ್ಕಾರದ ಪಾಠವನ್ನು ಹೇಳಿಕೊಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸಂಚಾಲಕ ಫಾ ಅಬೆಲ್ ಲೋಬೊ ಮಕ್ಕಳ ಸಾಧನೆಯನ್ನು ಪ್ರಶಂಸಿಸಿ ಶುಭ ಹಾರೈಸಿದರು ಪ್ರಾಂಶುಪಾಲ ವಿಜಯ್ ಲೋಬೋ, ಪ್ರಾಸ್ತಾವನೆಗೈದು ಮಕ್ಕಳಲ್ಲಿ ಪ್ರೀತಿ ವಿಶ್ವಾಸದಿಂದಿದ್ದರೆ ಅವರು ಆತ್ಮವಿಶ್ವಾಸದಿಂದ ಉತ್ತಮ ಸಾಧನೆಗೈಯಲು ಸಾಧ್ಯ,ಈ ನಿಟ್ಟಿನಲ್ಲಿ ಪೋಷಕರ ಶಿಕ್ಷಕರ ಪಾತ್ರ ಮಹತ್ವದ್ದು ಎಂದರು.
2025-26 ನೇ ಶೈಕ್ಷಣಿಕ ವರ್ಷದಲ್ಲಿ ಹತ್ತನೇ ತರಗತಿಯಲ್ಲಿ 625 ಅಂಕ ಪಡೆದ ಅನನ್ಯ ಸೇರಿದಂತೆ ಸಾಧನೆಗೈದ ಇತರ ವಿದ್ಯಾರ್ಥಿಗಳನ್ನು ಶಾಲಾ ವತಿಯಿಂದ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಗಣ್ಯರು ಹೆಚ್ಚಿನ ಸಂಖ್ಯೆಯ ಪೋಷಕರು ಉಪಸ್ಥಿತರಿದ್ದರು.