
ಬೆಳ್ತಂಗಡಿ: ಮುಂಡಾಜೆ ಸಮೀಪದ ಅರಸಮಜಲು ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಈಜಲು ಹೋಗಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ ಮುಳುಗಿ ಸಾವನ್ನಪ್ಪಿದ ಘಟನೆ ಮಾ.೧೮ ರಂದು ನಡೆದಿದೆ. ಮೃತಪಟ್ಟ ಬಾಲಕ ಮುಂಡಾಜೆ ಕೂಳೂರು ನಿವಾಸಿ ನಿಶಾಂತ್ (16) ಎಂದು ಗುರುತಿಸಲಾಗಿದೆ.

ಮುಧ್ಯಾಹ್ನ ವೇಳೆ ತನ್ನ ಸಂಬಂಧಿಕರ ಜತೆಗೆ ಮನೆ ಸಮೀಪದ ನದಿಯಲ್ಲಿ ಈಜಲು ಹೋಗಿದ್ದು ಈತ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ತಕ್ಷಣವೇ ಆತನನ್ನು ರಕ್ಷಿಸುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿದು ಬಂದಿದೆ.