
ಬೆಳ್ತಂಗಡಿ: ತಾಲೂಕಿನ ವಿವಿಧ ಕಡೆಗಳಲ್ಲಿ ಕಳೆದ ಕೆಲವು ದಿನಗಳಿಂದ ವಿಪರೀತ ಚಿರತೆ ಹಾವಳಿ ಕಂಡು ಬರುತಿದ್ದು, ಇದೀಗ ಬೆಳ್ತಂಗಡಿ ನಗರ ವ್ಯಾಪ್ತಿಯಲ್ಲಿಯೂ ಚಿರತೆ ಸಂಚಾರ ಕಂಡು ಬಂದಿದೆ.ಮಂಗಳವಾರ ಮಟ್ಲ, ಸುದೆಮುಗೇರು ಭಾಗದಲ್ಲಿ ಸಂಚಾರ ನಡೆಸಿದ್ದು, ಸಾಕು ನಾಯಿಯೊಂದನ್ನು ಹಿಡಿದಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಬುಧವಾರ ಸಂಜೆ ಪಟ್ಟಣ ಪಂಚಾಯತ್ ಧ್ವನಿವರ್ಧಕದ ಮೂಲಕ ಸಾರ್ವಜನಿಕರು ಬೆಳಗ್ಗೆ ಮತ್ತು ಸಂಜೆ ಹೊತ್ತು ಅನಾವಶ್ಯಕ ತಿರುಗಾಡುವುದು ಮಕ್ಕಳು ಹಾಗೂ ಸಾಕು ಪ್ರಾಣಿಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.