
ಬೆಳ್ತಂಗಡಿ: ತೋಟದಲ್ಲಿ ಕೆಲಸ ಮಾಡುತಿದ್ದ ವೇಳೆ ಹಾವು ಕಚ್ಚಿ ಮಹಿಳೆ ಸಾವನ್ನಪ್ಪಿದ ಘಟನೆ ಶಿಶಿಲದಲ್ಲಿ ಡಿ21 ರಂದು ನಡೆದಿದೆ.
ಶಿಶಿಲ ಗ್ರಾಮದ ಗುಡ್ಡೆ ತೋಟ ನಿವಾಸಿ ಪ್ರೇಮ ( 55)ರವರು ಮೃತ ಮಹಿಳೆಯಾಗಿದ್ದಾರೆ. ಮದ್ಯಾಹ್ನ ದ ವೇಳೆ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಇವರಿಗೆ ನಾಗರ ಹಾವು ಕಡಿದಿದೆ
ಹಾವು ಕಡಿದ ತಕ್ಷಣ ಪುತ್ತೂರು ಸರಕಾರಿ ಆಸ್ಪತ್ರೆಗೆ
ಶೌರ್ಯ ವಿಪತ್ತು ತಂಡದ ಸದಸ್ಯರ ಸಹಾಯದೊಂದೊಂದಿಗೆ ಕರೆದೋಯ್ಯಲಾಯಿತಾದರೂ ವಿಷ ವಿಪರೀತ ಅವರಿಸಿರುವ ಕಾರಣ ಮೃತಪಟ್ಟಿದ್ದಾರೆ ಎಂದು ತಿಳಿದು
ಮೃತ ಮಹಿಳೆ ಓರ್ವ ಹೆಣ್ಣು ಮಗಳು ವಿಜಯ ಹಾಗೂ ಪುತ್ರ ದಯಾನಂದ ಇವರನ್ನು ಅಗಲಿದ್ದಾರೆ.