ಬೆಳ್ತಂಗಡಿ: ನದಿಗೆ ಬಿದ್ದು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಆರಂಬೋಡಿ ಎಂಬಲ್ಲಿ ಫೆ 23 ರ ಮಧ್ಯಾಹ್ನ ನಡೆದಿದೆ.ರಾಮಕುಂಜ ಎಂಬಲ್ಲಿಯ ಹತ್ತನೇ ತರಗತಿಯಲ್ಲಿ ಕಲಿಯುತಿದ್ದ ವಿದ್ಯಾರ್ಥಿ ಪವನ್ (16)
ಆರಂಬೋಡಿಯಲ್ಲಿರುವ ಅಜ್ಜಿ ಮನೆಯಿಂದ ಸಿದ್ಧಕಟ್ಟೆಯ ಶಾಲೆಗೆ ಹೋಗುತಿದ್ದು ಭಾನುವಾರ ಮನೆ ಸಮೀಪದ ಫಲ್ಗುಣಿ ನದಿಯತ್ತ ಹೋಗಿದ್ದು ಈ ವೇಳೆ ಕಾಲು ಜಾರಿ ನದಿಗೆ ಬಿದ್ದು ಸಾವನ್ನಪ್ಪಿದ್ದು ಮೃತ ದೇಹವನ್ನು ಬೆಳ್ತಂಗಡಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.