ಬಾಗಲಕೋಟೆ: ಆನ್ ಲೈನ್ ಜೂಜಾಟದಿಂದ ಅನೇಕ ಕುಟುಂಬಗಳು ಬೀದಿಗೆ ಬಂದಿವೆ ಹೀಗಾಗಿ, ಈ ಜೂಜಾಟ ಬ್ಯಾನ್ ಮಾಡಬೇಕೆಂದು ಯುವಕನೋರ್ವ ಇಳಕಲ್ ಸೀರೆ ಮೇಲೆ “ಬ್ಯಾನ್ ರಮ್ಮಿ ಮತ್ತು ಡ್ರೀಮ್ 11” ಎಂದು ನೇಯ್ದು ಪ್ರಧಾನಿ ಮೋದಿಗೆ ಕಳುಹಿಸುವ ಯೋಚನೆಯಲ್ಲಿದ್ದಾರೆ.
ಆನ್ ಲೈಟ್ ಆಟಗಳಿಂದ ಅನೇಕ ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾಳಜಿ ವಹಿಸಿದ ಇಳಕಲ್ ನಗರದ ಮೇಘರಾಜ್ ಗುದ್ದಟ್ಟಿ ಅವರು ವಿನೂತನವಾಗಿ ಪ್ರಧಾನಿ ಕಾರ್ಯಾಲಯಕ್ಕೆ ಮನವಿ ಸಲ್ಲಿಸಲಿದ್ದಾರೆ.
ಮೇಘರಾಜ್ ಈ ಹಿಂದೆ ಇಳಕಲ್ ಸೀರೆಯಲ್ಲಿ ಆಯೋದ್ಯ ಶ್ರೀರಾಮ ಮಂದಿರ ನೇಯ್ದಿದ್ದರು. ಸೂರ್ಯಯಾನ-3 ಯಶಸ್ವಿಯಾದಾಗ ವಿಜ್ಞಾನಿಗಳಿಗೆ ಶುಭಾಶಯ ಎಂದು ಸೀರೆಯಲ್ಲಿ ನೇಯ್ದಿದ್ದರು. ಅಲ್ಲದೇ, ಪುನೀತ್ ರಾಜಕುಮಾರ್ಅವರ ಕೊನೆಯ ಚಿತ್ರ ಜೇಮ್ಸ್ ಶತದಿನ ಆಚರಿಸಲಿ ಎಂದು ಸೀರೆಯಲ್ಲಿ ನೇಯ್ದು ಶುಭಹಾರೈಸಿದ್ದರು. ಹಾಗೇ ಕಾಂತಾರ ಚಿತ್ರಕ್ಕೆ ಆಸ್ಕರ್ ಅವಾರ್ಡ್ ಸಿಗಲಿ ಎಂದು ಸೀರೆಯಲ್ಲಿ ನೇಯ್ದಿದ್ದರು.