ಕಾರವಾರ: ಹೆಬ್ಬಾವಿಗೆ ಹೊಡೆದ ಗುಂಡು ಮರಳಿ ತಗುಲಿ ಯುವಕ ಸಾವು..!

ಸಾಂದರ್ಭಿಕ ಚಿತ್ರ

ಕಾರವಾರ: ಹೆಬ್ಬಾವಿಗೆ ಹೊಡೆದ ಗುಂಡು ಮರಳಿ ತಗುಲಿ ಯುವಕನೋರ್ವ ಸಾವನ್ನಪ್ಪಿದ ಘಟನೆೆ ಕುಮಟಾದ ಕತಗಾಲ ಗ್ರಾಮದಲ್ಲಿ ಸಂಭವಿಸಿದೆ.

ಆ.31ರ ರಾತ್ರಿ ವೇಳೆ ಕೋಳಿ ಫಾರ್ಮಗೆ ಬಂದ ಹೆಬ್ಬಾವಿಗೆ ಪ್ರಥಮ ಸುಬ್ಬು ನಾಯ್ಕ(28) ಎಂಬಾತ ನಾಡ ಬಂದೂಕಿನಿಂದ ಗುಂಡು ಹೊಡೆದಿದ್ದು ಈ ವೇಳೆ ಗುಂಡು ಮರಳಿ ತಗುಲಿ ಯುವಕ ಸಾವನ್ನಪ್ಪಿದ್ದಾನೆ.

ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು, ಬಂದೂಕಿನ ಮಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

error: Content is protected !!