“ಬಡವರನ್ನು ಆರ್ಥಿಕವಾಗಿ ಬಲಪಡಿಸುತ್ತಿರುವುದರಿಂದ ವೈರಿಗಳಿಗೆ ಅಸೂಯೆ: ಜನರ ಪ್ರೀತಿ ಇರೋವರೆಗೆ ರಾಜಕೀಯ ವೈರಿಗಳ ದ್ವೇಷಕ್ಕೆ ಹೆದರುವವನಲ್ಲ”: ಸಿ.ಎಂ ಸಿದ್ದರಾಮಯ್ಯ

ಹಾವೇರಿ: ರಾಜ್ಯದ ಬಡ ಜನತೆಗೆ ಆರ್ಥಿಕ ಶಕ್ತಿ ತಂಬುವ ಕೆಲಸ ತಮ್ಮಿಂದಾಗುತ್ತಿರುವುದರಿಂದ ರಾಜಕೀಯ ವೈರಿಗಳಿಗೆ ದ್ವೇಷ ಹುಟ್ಟಿಕೊಂಡಿದೆ. ಜನರ ಪ್ರೀತಿ ಇರೋವರೆಗೆ ರಾಜಕೀಯ ವೈರಿಗಳ ದ್ವೇಷಕ್ಕೆ ಹೆದರುವವನಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತಾಡಿದ ಅವರು “ಹಿಂದುಳಿದ ವರ್ಗದಿಂದ ಬಂದಿರುವ ತಾನು ಎರಡು ಬಾರಿ ಮುಖ್ಯಮಂತ್ರಿಯಾಗಿರುವುದನ್ನು ಸಹಿಸಲು ತನ್ನ ರಾಜಕೀಯ ವೈರಿಗಳಿಗೆ ಅಗುತ್ತಿಲ್ಲ, ಅವರು ಏನೇ ಷಡ್ಯಂತ್ರ ಹೂಡಿದರೂ ತಾನು ಹೆದರುವವನಲ್ಲ . ಅವರು ವಿರೋಧಿಸುತ್ತಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದರಿಂದ ಅವರಿಗೆ ಹೊಟ್ಟೆಯುರಿ ಶುರುವಾಗಿದೆ. ಅವರು ತನ್ನನ್ನು ಎಷ್ಟೇ ದ್ವೇಷಿಸಿದರೂ ಜನರ ಬೆಂಬಲ, ಪ್ರೀತಿ-ವಿಶ್ವಾಸ ತನ್ನ ಮೇಲೆ ಇರೋವರೆಗೆ ಅಲ್ಲಾಡಿಸಲಾಗಲ್ಲ” ಎಂದಿದ್ದಾರೆ.

error: Content is protected !!