ಕೊಕ್ಕಡದಲ್ಲಿ ಬಿರುಗಾಳಿ: ಧರೆಗುರುಳಿದ ನೂರಕ್ಕೂ ಅಧಿಕ ಅಡಿಕೆ ಗಿಡಗಳು: ಗಾಳಿಯಲ್ಲಿ ಹಾರಿದ ಮನೆಯ ಮೇಲ್ಛಾವಣಿ..!

ನೆಲ್ಯಾಡಿ: ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು ಕೊಕ್ಕಡ ಗ್ರಾಮದಲ್ಲಿ ಬಿರುಗಾಳಿಗೆ ಹಲವು ಮನೆ, ಕೃಷಿಗೆ ಹಾನಿಯಾಗಿದೆ.

ಆ..25ರಂದು ಕೊಕ್ಕಡ ಗ್ರಾಮದ ಕೊಡಿಂಗೇರಿ, ಪಿಜಿನಡ್ಕ, ಹಾರ, ಮಡೆಜೋಡಿ ಮೊದಲಾದ ಕಡೆಗಳಲ್ಲಿ ಭಾರೀ ಬಿರುಗಾಳಿ ಬೀಸಿದ್ದು ಪಿಜಿನಡ್ಕ ಕಾಲೋನಿ ನಿವಾಸಿ ಬಾಬಿ ಹಾಗೂ ಅವರ ಸಮೀಪದ ಕೆಲವು ಮನೆಗಳ ಮೇಲ್ಚಾವಣಿ ಬಿರುಗಾಳಿಗೆ ಹಾರಿ ಹೋಗಿದೆ.

ಮಡೆಜೋಡಿ ಸಮೀಪದ ಲಿಯೋ ಡಿಸೋಜಾ, ಜಬ್ಬಾರ್, ಕೊಡಿಂಗೇರಿಯ ಅಣ್ಣು ಗೌಡ, ಶಶಿ, ಕೊಕ್ಕಡ ಗ್ರಾ.ಪಂ ಸದಸ್ಯೆ ಲತಾ, ಹಾರ ಬಾಲಪ್ಪ ಗೌಡ ಅವರಿಗೆ ಸೇರಿದ ಅಡಿಕೆ ಮರಗಳು ನೆಲಕ್ಕುರುಳಿದೆ.

ಸ್ಥಳಕ್ಕೆ ಕಂದಾಯ ಹಾಗೂ ಕೊಕ್ಕಡ ಗ್ರಾ.ಪಂ.ಸಿಬ್ಬAದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!