ಶಿರಾಡಿ ಘಾಟಿ ಸಂಚಾರ ಮುಕ್ತ: ವಾಹನ ಸಂಚರಿಸುವಷ್ಟು ಮಣ್ಣು ತೆರವು: ಮತ್ತಷ್ಟು ಗುಡ್ಡ ಕುಸಿಯುವ ಆತಂಕ: ನಿಮ್ಮದೇ ರಿಸ್ಕ್‌ನಲ್ಲಿ ಸಂಚರಿಸಿ!

ಹಾಸನ: ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಶಿರಾಡಿ ಘಾಟಿನಲ್ಲಿ 3ನೇ ಬಾರಿಗೆ ಗುಡ್ಡ ಕುಸಿದಿದ್ದು ಸದ್ಯ ವಾಹನ ಸಂಚರಿಸುವಷ್ಟು ಮಣ್ಣು ತೆರವುಗೊಳಿಸಿ ಸಂಚಾರ ಮುಕ್ತ ಮಾಡಲಾಗಿದೆ.

ಬೆಂಗಳೂರು- ಮಂಗಳೂರು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು, ನಿನ್ನೆ ರಾತ್ರಿ ಮತ್ತೆ ಭೂಕುಸಿತ ಉಂಟಾಗಿ ರಸ್ತೆ ಮುಚ್ಚಿಹೋಗಿತ್ತು. ಈ ವೇಳೆ ಹಲವಾರು ವಾಹನಗಳು ಸಿಲುಕಿಕೊಂಡಿದ್ದು ಅದೃಷ್ಟವಶಾತ್ ಜೀವಹಾನಿ ಆಗಿರಲಿಲ್ಲ. ಬಳಿಕ ತಾತ್ಕಾಲಿಕವಾಗಿ ಮಣ್ಣು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಭೂಕುಸಿತದ ಆತಂಕ ಇನ್ನೂ ಇದ್ದು, ವಾಹನ ಸವಾರರು ಜೀವಭಯದಿಂದಲೇ ಸಂಚರಿಸಬೇಕಿದೆ. ಹೀಗಾಗಿ ತಮ್ಮದೆ ರಿಸ್ಕ್‌ನಲ್ಲಿ ವಾಹನ ಸವಾರರು ಈ ಘಾಟ್ ರಸ್ತೆಯಲ್ಲಿ ಸಂಚರಿಸಬೇಕಿದೆ.

error: Content is protected !!