34 ದಿನಗಳಲ್ಲಿ ಬಾಲಕನಿಗೆ 6 ಬಾರಿ ಹಾವು ಕಡಿತ..!: ಕನಸಿನಲ್ಲಿಯೂ ಕಾಡುವ ನಾಗರ ಹಾವು: 9ನೇ ಬಾರಿ ನನ್ನನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದ ಬಾಲಕ

ಉತ್ತರ ಪ್ರದೇಶ: 34 ದಿನಗಳಲ್ಲಿ ಒಂದೇ ಹಾವು ಯುವಕನಿಗೆ ಆರು ಬಾರಿ ಕಚ್ಚಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಫತೇಪುರ್ ಜಿಲ್ಲೆಯ ಮಾಲ್ವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಸೌರಾ ಗ್ರಾಮದ ನಿವಾಸಿ ವಿಕಾಸ್ ದ್ವಿವೇದಿ ಎಂಬ ಯುವಕನಿಗೆ ಹಾವೊಂದು ಪದೇ ಪದೇ ಕಚ್ಚುತ್ತಿದ್ದು ಆ ಸ್ಟೋರಿಯೇ ಬೆಚ್ಚಿಬೀಳಿಸುವಂತಿದೆ.

ವಿಕಾಸ್ ಎಂಬ ಬಾಲಕನಿಗೆ ಈಗಾಗಲೆ 6 ಬಾರಿ ಹಾವು ಕಚ್ಚಿದ್ದು ಅದು ಕೂಡ ಶನಿವಾರ ಅಥವ ಭಾನುವಾರ ಮಾತ್ರ ಆತನಿಗೆ ಹಾವು ಕಚ್ಚಿರುವುದು. ಆದರೆ ಇದೀಗ 7 ನೇ ಬಾರಿ ಹಾವು ಕಚ್ಚಿದ್ದು ಬಾಲಕ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆದರೆ 7ನೇ ಬಾರಿ ಹಾವು ಕಡಿದಿದ್ದು ಮಾತ್ರ ಶುಕ್ರವಾರ.

ಪ್ರತಿ ಬಾರಿ ಹಾವು ಕಚ್ಚಿದಾಗ ವಿಕಾಸ್ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಮನೆಗೆ ತೆರಳುತ್ತಾರೆ. ಪ್ರತೀ ಬಾರಿ ಹಾವು ಕಚ್ಚಿತ್ತಿರುವುದಕ್ಕೆ ವೈದ್ಯರು ಅವನನ್ನು ಗ್ರಾಮದಿಂದ ಹೊರಗುಳಿಯುವಂತೆ ಸಲಹೆ ನೀಡಿದ್ದರು. ಹೀಗಾಗಿ ಆತ ತನ್ನ ಚಿಕ್ಕಮ್ಮನ ಮನೆಯಲ್ಲಿ ಇದ್ದನು. ಆದರೆ ಅಲ್ಲಿಯೂ ಬಿಡದ ಹಾವು ಅವನನ್ನು 6ನೇ ಬಾರಿ ಕಚ್ಚಿದೆ.

ಕನಸಿನ ಕಥೆ ಹೇಳಿದ ವಿಕಾಸ್..!

ಸಾಂದರ್ಭಿಕ ಚಿತ್ರ

ವಿಕಾಸ್ ತನ್ನ ವಿಚಿತ್ರ ಕನಸಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ಆ ಹಾವು 9 ಬಾರಿ ಕಚ್ಚುತ್ತದೆ ಮತ್ತು 9ನೇ ಬಾರಿ ನನ್ನನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲ ಹಾವು ಕಚ್ಚುವ ಮೊದಲು ನನಗೆ ಏನಾದರೂ ಸಂಭವಿಸಲಿದೆ ಎಂಬ ಮುನ್ಸೂಚನೆ ದೊರೆಯುತ್ತದೆ ಎಂದಿದ್ದಾನೆ. ಅಹಿತಕರ ಲಕ್ಷಣಗಳು ಕಂಡುಬರುವ ಮುನ್ನ ನಮಗೆ ನಮ್ಮ ಮಗ ತಿಳಿಸುತ್ತಾನೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.
ಪದೇ ಪದೇ ಹಾವು ಕಚ್ಚುತ್ತಿರುವ ಘಟನೆ ನಿಜಕ್ಕೂ ಅಚ್ಚರಿ ಮೂಡಿಸಿದೆ.

error: Content is protected !!