ವೈಕುಂಠ ಸಮಾರಾಧನೆಯಲ್ಲಿ ಮಾದರಿ ಕಾರ್ಯಕ್ರಮ: ತಾಯಿಯ ಸ್ಮರಣಾರ್ಥ 500 ಗಂಧದ ಗಿಡ ವಿತರಣೆ:

 

 

 

ಬೆಳ್ತಂಗಡಿ: ತಾಯಿಯ ಸ್ಮರಣಾರ್ಥವಾಗಿ ಅವರ ವೈಕುಂಠ ಸಮಾರಾಧನೆಯ ಕಾರ್ಯಕ್ರಮದಲ್ಲಿ ಸುಮಾರು 500 ಕ್ಕೂ ಅಧಿಕ ಗಂಧದ ಸಸಿಗಳನ್ನು ವಿತರಿಸುವ ಮೂಲಕ ವಿಶೇಷ ಕಾರ್ಯಕ್ರಮವನ್ನು ಮದ್ದಡ್ಕದ ಪಡ್ಡೈಲು ರಾಜ್ ಪ್ರಕಾಶ್ ಶೆಟ್ಟಿ ಮತ್ತು ಮನೆಯವರು ಮಾಡಿದ್ದಾರೆ.ಪಡ್ಡೈಲುಗುತ್ತು ಬಾಬು ಶೆಟ್ಟಿಯವರ ಧರ್ಮಪತ್ನಿ ಹಾಗೂ ಗುತ್ತಿಗೆದಾರ ರಾಜ್ ಪ್ರಕಾಶ್ ಶೆಟ್ಟಿಯವರ ಮಾತೃಶ್ರೀ ಶೀಲಾವತಿ ಶೆಟ್ಟಿಯವರು ಕಳೆದ ಜೂ 17 ರಂದು ದೈವಧೀನರಾಗಿದ್ದು ಅವರ ವೈಕುಂಠ ಸಮಾರಾಧನೆ ಕಾರ್ಯಕ್ರಮವು ಇಂದು ಜೂ 30 ಮದ್ದಡ್ಕದ ಪಡ್ಡೈಲುಗುತ್ತು ಮನೆಯಲ್ಲಿ ನಡೆಯಿತು. ಈ ವೇಳೆ ಬಂದಂತಹ ಎಲ್ಲರಿಗೂ ಗಂಧದ ಸಸಿಗಳನ್ನು ವಿತರಿಸುವ ಮೂಲಕ ತಾಯಿಯ ಸ್ಮರಣಾರ್ಥ ಪರಿಸರ ಜಾಗೃತಿ ಕಾರ್ಯಕ್ರಮವನ್ನು  ಮಾಡಿದ್ದಾರೆ.

error: Content is protected !!