ಸರಸ್ವತಿ ಭಜನಾ ಮಂಡಳಿ ವಿವೇಕಾನಂದ ನಗರ ಲಾಯಿಲ: ನೂತನ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ:

 

 

 

ಬೆಳ್ತಂಗಡಿ: ಶ್ರೀ ಸರಸ್ವತಿ ಭಜನಾ ಮಂಡಳಿ ರಿ. ವಿವೇಕಾನಂದ ನಗರ ಹಳೇ ಪೇಟೆ ಲಾಯಿಲ, ಉಜಿರೆ ಇದರ ನೂತನ ಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶುಕ್ರವಾರ ಅಂಗನವಾಡಿ ವಠಾರದಲ್ಲಿ ನಡೆಯಿತು.
ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಉಜಿರೆ ಎಸ್.ಪಿ. ಆಯಿಲ್ ಮಿಲ್ ಮಾಲಕ ಶಿವಕಾಂತ ಗೌಡ ,ವಿಮಲ್ ರೈಸ್ ಮಿಲ್ ಮಾಲಕ ದಾಮೋದರ್, ಚಿತ್ತರಂಜನ್ ಜೈನ್, ಸರಸ್ವತಿ ಭಜನಾ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.

 

 

 

 

 

error: Content is protected !!