ಸೋಮಂತಡ್ಕ,ಅಕ್ರಮ ಮರಳುಗಾರಿಕೆ, ವಿವಾದ: ಕಡಿರುದ್ಯಾವರ ಮಾಜಿ ಅಧ್ಯಕ್ಷನ ಮೇಲೆ ಹಲ್ಲೆ

ಬೆಳ್ತಂಗಡಿ : ಇಂದಬೆಟ್ಟಿನಲ್ಲಿ ಕಾರ್ಯಚರಿಸುತ್ತಿದ್ದ ಅಕ್ರಮ ಮರಳುಗಾರಿಕೆ ವಿಚಾರದಲ್ಲಿ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಹೊಡೆದಾಟದವರೆಗೆ ಮುಂದುವರಿದ ಘಟನೆ ಸೋಮಂತಡ್ಕದಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ  ಮಾಜಿ ಗ್ರಾ.ಪಂ‌ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾಗಿರುವ ಅಶೋಕ್ ಪೂಜಾರಿ ಮೇಲೆ ಅಕ್ರಮ ಮರಳುಗಾರಿಕೆ ವಿಚಾರದಲ್ಲಿ ಒಂದು ಸಮುದಾಯವನ್ನು ಅವಮಾನಿಸಿ ನಿಂದಿಸಿದ್ದಾರೆ ಎಂದು ಆರೋಪಿಸಿ ಮೇ 06 ರ ರಾತ್ರಿ ತಂಡವೊಂದು‌ ಸೋಮಂತಡ್ಕ ಪೇಟೆಯಲ್ಲಿ  ಪ್ರಶ್ನಿಸಿದೆ ಈ ವೇಳೆ ಮಾತಿನ ಚಕಮಕಿ ನಡೆದು ಹಲ್ಲೆ ನಡೆದಿದೆ. ಈ ಸಂದರ್ಭ ಅಶೋಕ್ ಪೂಜಾರಿಯವರ ಅಂಗಿ ಹರಿದಿದ್ದು ‌ ಹಲ್ಲೆಯ ವಿಡಿಯೋ ಮತ್ತು ಆಡಿಯೋ ವೈರಲ್ ಅಗಿದ್ದು. ಪ್ರಕರಣದ ಬಗ್ಗೆ ಈವರೆಗೆ ಯಾವುದೇ ದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

 

 

 

error: Content is protected !!