ಶಾಂತಿಶ್ರೀ ಜೈನ ಮಹಿಳಾ ಸಮಾಜ ಬೆಳ್ತಂಗಡಿ: ಮೇ.19ರಂದು ‘ಸಾಂಸ್ಕೃತಿಕ ವೈಭವ’ ಕಾರ್ಯಕ್ರಮ: ಯಕ್ಷಗಾನ ಶೈಲಿಯಲ್ಲಿ ‘ಶ್ರೀಜಿನ ಶಾಂತಿನಾಥ ಚರಿತೆ’ ಕಾವ್ಯವಾಚನ- ಪ್ರವಚನ

ಬೆಳ್ತಂಗಡಿ: ಶಾಂತಿಶ್ರೀ ಜೈನ ಮಹಿಳಾ ಸಮಾಜ ಬೆಳ್ತಂಗಡಿ ಇದರ ವತಿಯಿಂದ ಮೇ.19ರಂದು “ಪಿನಾಕಿ ಹಾಲ್,’ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಕಲಾಭವನದಲ್ಲಿ ‘ಸಾಂಸ್ಕೃತಿಕ ವೈಭವ’ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ 3.00 ಗಂಟೆಯಿಂದ ಕಾವ್ಯಶ್ರೀ ಆಜೇರು ಅವರ ಕಂಠದಲ್ಲಿ, ಯಕ್ಷಗಾನ ಶೈಲಿಯಲ್ಲಿ ‘ಶ್ರೀಜಿನ ಶಾಂತಿನಾಥ ಚರಿತೆ’ ಕಾವ್ಯವಾಚನ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯರಾದ ಮುನಿರಾಜ ರೆಂಜಾಳ, ಕಾರ್ಕಳ ಇವರಿಂದ ಪ್ರವಚನ ನಡೆಯಲಿದೆ.

ಚೆಂಡೆಯಲ್ಲಿ ಶ್ರೀಪತಿ ನಾಯಕ್ ಆಜೇರು,ಮದ್ದಳೆ ಚಂದ್ರಶೇಖರ ಗುರುವಾಯನಕೆರೆ ಸಹಕರಿಸಲಿದ್ದಾರೆ.

error: Content is protected !!