ವಸಂತ ಬಂಗೇರ ಪಾರ್ಥಿವ ಶರೀರ ಬೆಳ್ತಂಗಡಿಗೆ ಆಗಮನ: ತಾಲೂಕು ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆ:

 

 

 

ಬೆಳ್ತಂಗಡಿ: ತಾಲೂಕಿನ  ಮಾಜಿ ಶಾಸಕ ವಸಂತ ಬಂಗೇರ ಅವರ ಮೃತ ದೇಹ ಬೆಂಗಳೂರಿನಿಂದ ಇಂದು ಮುಂಜಾನೆ ಚಾರ್ಮಾಡಿಯ ಮೂಲಕ ಬೆಳ್ತಂಗಡಿ ಹಳೇಕೋಟೆಯಲ್ಲಿರುವ ಅವರ ಸ್ವಗೃಹ “ಸುಪ್ರಭಾತ” ಕ್ಕೆ ತರಲಾಗಿದೆ. ಬೆಳಿಗ್ಗೆ 10.30 ಗಂಟೆಗೆ ಬೆಳ್ತಂಗಡಿ ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ ಬಸ್ ನಿಲ್ದಾಣ ಸೇರಿದಂತೆ ಪೇಟೆಯ ಮುಖ್ಯ ರಸ್ತೆಯಲ್ಲಿ ಅಂತಿಮ ಯಾತ್ರೆ ಸಾಗಿ ನಂತರ ಅಂತ್ಯ ಸಂಸ್ಕಾರ ವಿದಿವಿಧಾನಗಳು ನಡೆಯಲಿದೆ. ಬಂಗೇರ ಅವರ ನಿಧನಕ್ಕೆ ಗಣ್ಯರು ಸೇರಿದಂತೆ ಇಡೀ ತಾಲೂಕಿನ ಜನ ಕಂಬನಿ ಮಿಡಿದಿದ್ದು ಅಂತಿಮ ದರ್ಶನಕ್ಕೆ ಮುಖ್ಯ ಮಂತ್ರಿಗಳು, ಸಚಿವರುಗಳು, ಶಾಸಕರುಗಳು, ಗಣ್ಯರು ಸೇರಿದಂತೆ ಸಾವಿರಾರೂ ಜನ ಸೇರುವ ನಿರೀಕ್ಷೆ ಇದ್ದು ಇದಕ್ಕಾಗಿ ಸಕಲ ಸಿದ್ಧತೆಗಳು ತಾಲೂಕು ಕ್ರೀಡಾಂಗಣದಲ್ಲಿ  ಮಾಡಲಾಗಿದೆ.

error: Content is protected !!