ಬೆಳ್ತಂಗಡಿ, ಮಾಜಿ ಶಾಸಕ ವಸಂತ ಬಂಗೇರ ನಿಧನ: ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ಸಂತಾಪ:

 

 

 

ಬೆಳ್ತಂಗಡಿ: ಮಾಜಿ ಶಾಸಕ ವಸಂತ ಬಂಗೇರ ನಿಧನಕ್ಕೆ ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನಲ್ಲಿ 5 ಬಾರಿ ಶಾಸಕರಾಗಿ ಆಯ್ಕೆಯಾಗಿ ಸದಾ ಬಡವರ ಪರ ಹಾಗೂ ಅನ್ಯಾಯದ ವಿರುದ್ಧ ಸದಾ ಧ್ವನಿಯೆತ್ತುತಿದ್ದ ನೇರ ನಿಷ್ಠುರವಾದಿ ನಾಯಕರಾಗಿ ಗುರುತಿಸಿಕೊಂಡಿದ್ದ ವಸಂತ ಬಂಗೇರ ಅವರ ನಿಧನದ ಸುದ್ಧಿ ತಿಳಿದು ಬೇಸರ ಉಂಟಾಯಿತು. ಅವರ ಮಾತು ಕಠೋರವಾಗಿದ್ದರು ಮನಸ್ಸು ಮಾತ್ರ ತುಂಬಾ ಮೃದು ಸದಾ ಜನರ ಪರವಾಗಿ ಮಿಡಿಯುತಿದ್ದ ಅವರ ನಿಧನದಿಂದ ಬೆಳ್ತಂಗಡಿ ಜನತೆ ದೊಡ್ಡ ನಾಯಕನನ್ನು ಕಳೆದುಕೊಂಡಂತಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಸಂತಾಪ ಸೂಚಿಸಿದ್ದಾರೆ.

error: Content is protected !!