ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ: ತಂಪೇರಿದ ಸಿಲಿಕಾನ್ ಸಿಟಿ

ಸಾಂದರ್ಭಿಕ ಚಿತ್ರ

ಬೆಂಗಳೂರು: ಸುಡು ಬಿಸಿಲಿಗೆ ಹೈರಾಣಾಗಿದ್ದ ಬೆಂಗಳೂರಿನ ಜನರಿಗೆ ಇಂದು ಮಳೆಯ ಸಿಂಚನವಾಗಿದೆ.

ಬೆಂಗಳೂರಿನ ತಾಪಮಾನ ಒಂದು ವಾರ ಹೆಚ್ಚಾಗಲಿದೆ ಎಂದು ನಿನ್ನೆಯಷ್ಟೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ ಇಂದು (ಮೇ.03) ಕೆ.ಆರ್‌ಪುರಂ ವೈಟ್ ಫಿಲ್ಡ್, ವಿಧಾನ ಸೌಧ, ಚಾಲುಕ್ಯ ಸರ್ಕಲ್, ಶಿವಾನನಂದ ಸರ್ಕಲ್, ಮೈಸೂರು ಬ್ಯಾಂಕ್ ಮೆಜೆಸ್ಟಿಕ್ ಸೇರಿದಂತೆ ಬೆಂಗಳೂರು ದಕ್ಷಿಣ ಭಾಗದಲ್ಲಿ ಭರ್ಜರಿ ಮಳೆಯಾಗಿದೆ.

ಮಳೆಯಿಂದ ಕೆ.ಆರ್ ಮಾರುಕಟ್ಟೆಯಲ್ಲಿ ಪರಿಸ್ಥಿತಿ ಅದ್ವಾನವಾಗಿದ್ದು, ರಸ್ತೆಯಲ್ಲಿ ಮಳೆ ನೀರು ಹರಿದು ರಸ್ತೆ ಬ್ಲಾಕ್ ಆಗಿದೆ.

error: Content is protected !!