ಒಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಶ್ವತ್ಥ ಕಟ್ಟೆ ನಿರ್ಮಾಣಕ್ಕೆ 3ಲಕ್ಷ ದೇಣಿಗೆ:

 

ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಒಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವವು ಸಮಿತಿ  ಅಧ್ಯಕ್ಷ ಶಶಿಧರ್ ಶೆಟ್ಟಿ ಸಾರಥ್ಯದಲ್ಲಿ ಬಹಳ  ವಿಜೃಂಭಣೆಯಿಂದ  ನಡೆಯಲಿದ್ದು, ಈಗಾಗಲೇ ಜೀರ್ಣೋದ್ಧಾರ ಕೆಲಸಕ್ಕೆ ಚಾಲನೆ ನೀಡಲಾಗಿದೆ. ದೇವಸ್ಥಾನದಲ್ಲಿ ಅಶ್ವತ್ಥ ಕಟ್ಟೆ ಬಹಳ ಪ್ರಾಮುಖ್ಯವಾದದ್ದು ಈ ಬಗ್ಗೆ ಪಡಂಗಡಿ ಕಳೆಂಜಿರೋಡಿ ಮನೆಯ ಶಮಂತ್ ಕುಮಾರ್ ಜೈನ್ ಅವರು ಮನಗಂಡು ಅಶ್ವತ್ಥ ಕಟ್ಟೆ ನಿರ್ಮಾಣ ಮಾಡಿಕೊಡುವ ಬಗ್ಗೆ ಒಪ್ಪಿಕೊಂಡಿದ್ದು ಈಗಾಗಲೇ ರೂ 3 ಲಕ್ಷವನ್ನು ದೇಣಿಗೆಯಾಗಿ ನೀಡಿದ್ದಾರೆ. ದೇವಸ್ಥಾನದಲ್ಲಿ ಪುಷ್ಕರಿಣಿ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳು ಬ್ರಹ್ಮಕಲಶೋತ್ಸವ ಸಮಿತಿಯ ಮಾರ್ಗದರ್ಶನದಲ್ಲಿ ನಡೆಯಲಿದೆ. ಗ್ರಾಮಸ್ಥರೆಲ್ಲರೂ ಅತೀ ಉತ್ಸಾಹದಿಂದ ಈ ಪುಣ್ಯ ಕಾರ್ಯಕ್ಕೆ ಕೈಜೋಡಿಸುತಿದ್ದಾರೆ.

error: Content is protected !!