ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬೆಳ್ತಂಗಡಿ ಪೊಲೀಸರ ಬಲೆಗೆ..!

ಬೆಳ್ತಂಗಡಿ: ಸುಮಾರು 18 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟು / ಪ್ರೊಕ್ಲೇಮಷನ್ ಆಸಾಮಿ ದನ್ ರಾಜ್ ಖಾತಿ @ ಧನ್ ಬಹಾದ್ದೂರ್ ಖಾತಿ @ ಉತ್ತಮ್ ಖಾತಿ  (46) ನೇಪಾಳ ಎಂಬಾತನನ್ನು ತಮಿಳುನಾಡು ರಾಜ್ಯದ ಕೊಯಮತ್ತೂರುನ ಕರುಮತಾಂಪಟ್ಟಿ ಎಂಬಲ್ಲಿಂದ ದಸ್ತಗಿರಿ ಮಾಡಿ ಅ.07ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಮಾನ್ಯ ಪ್ರದಾನ ಸಿ ಜೆ ಮತ್ತು ಜೆ ಎಮ್ ಎಫ್ ಸಿ ನ್ಯಾಯಾಲಯ ಬೆಳ್ತಂಗಡಿ ಸಿ.ಸಿ ನಂಬ್ರ 317/2005. ಠಾಣಾ ಅಕ್ರ 136/2004 ಕಲಂ. 324, 504 ಐಪಿಸಿ ಪ್ರಕರಣದಲ್ಲಿ ಈತ ತಲೆಮರೆಸಿಕೊಂಡಿದ್ದ. ಸದ್ಯ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರು ನಾಗೇಶ್ ಕದ್ರಿ, ಉಪ ನಿರೀಕ್ಷಕರುಗಳಾದ ಧನರಾಜ್ ಟಿ ಎಮ್ ಹಾಗು ಚಂದ್ರಶೇಖರರವರ ಸೂಕ್ತ ಮಾರ್ಗದರ್ಶನದಿಂದ ಬೆಳ್ತಂಗಡಿ ಪೊಲೀಸ್ ಠಾಣಾ ಹೆಚ್ ಸಿ 418 ವ್ರಷಭ ಹಾಗು ಪಿಸಿ 2466 ಬಸವರಾಜ್ ಎಸ್‌ಪಿರವರು ಖಚಿತ ಮಾಹಿತಿಯಂತೆ ನೇಪಾಳ ಮೂಲದ ಆರೋಪಿಯನ್ನು ಕರುಮತಾಂಪಟ್ಟಿ ಎಂಬಲ್ಲಿಂದ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇದೀಗ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

error: Content is protected !!