ಪತ್ರಿಕಾಗೋಷ್ಠಿಯಲ್ಲಿ ‘ಪೊಟ್ಟು ವಕೀಲ’ ಎಂದು ಉಲ್ಲೇಖಿಸಿದ ಶಾಸಕ ಹರೀಶ್ ಪೂಂಜಾ : ಶಿಸ್ತು ಕ್ರಮಕ್ಕೆ ಬಿ.ಎಂ.ಭಟ್ , ಶ್ರೀಕಾಂತ್ ಭಟ್ ದೂರು


ಬೆಳ್ತಂಗಡಿ:
ಶಾಸಕ ಹರೀಶ್ ಪೂಂಜಾರವರು ಪತ್ರಿಕಾಗೋಷ್ಠಿಯಲ್ಲಿ ‘ಪೊಟ್ಟು ವಕೀಲ’ ಎಂದು ಉಲ್ಲೇಖಿಸಿದ ಕಾರಣ ಅವರ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕಾಗಿ ವಕೀಲರ ಸಂಘಕ್ಕೆ ಬಿ.ಎಂ.ಭಟ್ ಹಾಗೂ ಶ್ರೀಕಾಂತ್ ಭಟ್ ದೂರು ನೀಡಿದ್ದಾರೆ.

ಆ.30ರಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುವಾಗ ಶಾಸಕ ಹರೀಶ್ ಪೂಂಜ ಅವರು 4 ಬಾರಿ ‘ಪೊಟ್ಟು ವಕೀಲ’ ಎನ್ನುವ ಮೂಲಕ ವಕೀಲ ವೃತ್ತಿಯನ್ನು ಸಾರ್ವಜನಿಕವಾಗಿ ನಿಂದಿಸಿರುತ್ತಾರೆ. ಇದು ನನಗೆ ತೀರ ಬೇಸರವನ್ನುಂಟು ಮಾಡಿರುತ್ತದೆ. ಓರ್ವ ವಕೀಲರಾಗಿದ್ದುಕೊಂಡು ವಕೀಲ ಸಮುದಾಯವನ್ನು ಈ ರೀತಿ ಕೀಳಾಗಿ ಕಂಡಿರುವ ಶಾಸಕರ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ತಮ್ಮ ರಾಜಕೀಯ ತೆವಲಿಗಾಗಿ ವಕೀಲ ವೃತ್ತಿಯನ್ನು ಅವಮಾನಿಸಿರುವ ವಕೀಲ ಸಂಘದ ಸದಸ್ಯರಾದ ಹರೀಶ್ ಪೂಂಜಾರವರವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕಾಗಿ ಮನವಿ ನೀಡಿದ್ದಾರೆ.

error: Content is protected !!