ಬೆಳ್ತಂಗಡಿ : ಪತ್ರ ಬರೆದಿಟ್ಟು ಮನೆಯಿಂದ ನಾಪತ್ತೆಯಾದ ಕಾಲೇಜ್ ವಿದ್ಯಾರ್ಥಿ..!

ಬೆಳ್ತಂಗಡಿ : ಕಾಲೇಜ್ ವಿದ್ಯಾರ್ಥಿಯೋರ್ವ ಮನೆಯಲ್ಲಿ ಪತ್ರ ಬರೆದಿಟ್ಟು ಕಾಣೆಯಾದ ಘಟನೆ ಸೆ.04ರಂದು ಕಸಬಾ ಗ್ರಾಮದಲ್ಲಿ ನಡೆದಿದೆ.

ಗುರುದೇವ ಕಾಲೇಜು ಬಳಿ ವಾಸವಾಗಿರುವ ಶ್ರೀಮತಿ ಗೀತಾ ಎಂಬವರ ಮಗ ಪುನೀತ್ ಎಸ್.ಟಿ (21) ಎಂಬಾತ 3 ನೇ ವರ್ಷದ ಬಿ.ಎಸ್.ಸಿಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು ನಿನ್ನೆ ಬೆಳಗ್ಗೆ ಸಹೋದರಿ ಕಾಲೇಜ್‌ಗೆ ತೆರಳಿದ ಬಳಿಕ ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಪತ್ರವೊಂದನ್ನು ಬರೆದಿಟ್ಟು ಮನೆಯಿಂದ ಕಾಣೆಯಾಗಿದ್ದಾನೆ. ತಾಯಿ ಸಕಲೇಶಪುರದಿಂದ ಮಧ್ಯಾಹ್ನ 3 ಗಂಟೆಗೆ ಬಂದು ಮನೆಯ ಬೀಗ ತೆಗೆದು ಒಳ ಹೋಗಿ ನೋಡಿದಾಗ ಮನೆಯ ಹಾಲ್‌ನಲ್ಲಿರುವ ಬೆಡ್ ಮೇಲೆ ಪತ್ರ ಸಿಕ್ಕಿದೆ. ನೆರೆ ಮನೆಯವರನ್ನು ವಿಚಾರಿಸಿದಾಗ 12:30ರ ವೇಳೆಗೆ ನೋಡಿದ್ದಾಗಿ ತಿಳಿಸಿದ್ದಾರೆ. ಆದರೆ ಕಾಣೆಯಾದ ಪುನೀತ್ ಎಸ್.ಟಿ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಈ ಕುರಿತು ಪುನೀತ್ ಎಸ್.ಟಿ ತಾಯಿ ಗೀತಾ ಅವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

error: Content is protected !!