ಬೆಳ್ತಂಗಡಿ: ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್ ವತಿಯಿಂದ 77ನೇ ಸ್ವಾತಂತ್ರ್ಯೋತ್ಸವ ಆಚರಣೆ

ಬೆಳ್ತಂಗಡಿ: ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್ ವತಿಯಿಂದ 77ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಗಿದ್ದು, ಸಂಘದ  ಕಛೇರಿಯ ಮುಂಭಾಗದಲ್ಲಿ ಪುಷ್ಪರಾಜ ಶೆಟ್ಟಿ ಅವರು ಧ್ವಜಾರೋಹಣ ನೆರವೇರಿಸಿದರು.

ಬಳಿಕ ಮಾತಾಡಿದ ಅವರು ಅನೇಕ ವೈವಿಧ್ಯತೆಯಿಂದ ಕೂಡಿದ ದೇಶ ನಮ್ಮದು. ಜಾತಿ ಧರ್ಮ ಎಂಬ ಹೆಸರಿನಲ್ಲಿ ವ್ಯತ್ಯಾಸಗಳು ಬಂದರೂ ದೇಶ ಎಂದು ಬಂದಾಗ ಅದನ್ನೆಲ್ಲ ಮರೆಯುವ ಗುಣ ಈ ಮಣ್ಣಿಗೆ ಇದೆ ಎಂದು ತಿಳಿಸಿ ಶುಭ ಹಾರೈಸಿದರು.

ಕಾರ್ಯದರ್ಶಿ ರೋನಾಲ್ಡ್ ಲೋಬೊರವರು ಶುಭ ಹಾರೈಸಿದರು. ಹೆಚ್ಚಿನ ಸಂಖ್ಯೆಯಲ್ಲಿ ವರ್ತಕರು ಭಾಗವಹಿಸಿದ್ದರು.
ಸದಸ್ಯ ಅಲ್ಫಾನ್ಸ್ ಫ್ರಾoಕೋ ಕಾರ್ಯಕ್ರಮ ನಿರ್ವಹಿಸಿ, ಮಾಜಿ ಸೈನಿಕ ಸಂಘದ ಕೋಶಾಧಿಕಾರಿ ಸುನಿಲ್ ಶೆಣೈ ಧನ್ಯವಾದವಿತ್ತರು.

error: Content is protected !!