ಕೆ ಎಸ್ ಆರ್ ಟಿ ಸಿ ಬಸ್ ಕಂಡೆಕ್ಟರ್ ಪಾದದ ಮೇಲೆ ಹರಿದ ಖಾಸಗಿ ವಾಹನ : ಗಂಭೀರ ಗಾಯಗೊಂಡ ಬಸ್ ನಿರ್ವಾಹಕ ಆಸ್ಪತ್ರೆಗೆ ದಾಖಲು: ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ನಡೆದ ಘಟನೆ:

 

 

 

 

ಬೆಳ್ತಂಗಡಿ;  ಬಸ್ ನಿರ್ವಾಹಕನ ಕಾಲಿನ ಮೇಲೆ ಖಾಸಗಿ ಗೂಡ್ಸ್ ವಾಹನವೊಂದು ಚಲಿಸಿ ಗಂಭೀರವಾಗಿ ಗಾಯಗೊಂಡ ಘಟನೆ ಜೂ 22 ರಂದು ಬೆಳ್ತಂಗಡಿ ಕೆ ಎಸ್ ಆರ್ ಟಿ ಸಿ  ಬಸ್ ನಿಲ್ದಾಣದಲ್ಲಿ ನಡೆದಿದೆ.
ಮಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ನಿರ್ವಾಹಕ ಮಾರುತಿ ಸಂತಗೋಲ್ ಅವರು ಬಸ್ಸಿನ ಮುಂದೆ ನಿಂತಿದ್ದ ವೇಳೆ ಬಸ್ ನಿಲ್ದಾಣದೊಳಗೆ ವೇಗವಾಗಿ ಬಂದ ನೋಂದಣಿಯಾಗದ ಗೂಡ್ಸ್ ವಾಹನ .ನಿರ್ವಾಹಕನ ಎಡ ಕಾಲಿನ ಪಾದದ ಮೇಲಿನಿಂದ ಗೂಡ್ಸ್ ವಾಹನದ ಟಯರ್ ಹರಿದುಹೋಗಿದೆ. ಅವರ ಎಡ ಕಾಲಿನ ಪಾದಕ್ಕೆ ಗಾಯಗಳಾಗಿದ್ದು ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

error: Content is protected !!