ಚೆಕ್ ಪ್ರಕರಣದಲ್ಲಿ ತಲೆಮರೆಸಿದ ವಾರಂಟ್ ಆರೋಪಿ: ನ್ಯಾಯಾಲಯಕ್ಕೆ ಹಾಜರುಪಡಿಸಿದ ಬೆಳ್ತಂಗಡಿ ಪೊಲೀಸರು


ಬೆಳ್ತಂಗಡಿ : ಚೆಕ್ ಪ್ರಕರಣದಲ್ಲಿ ತಲೆಮರೆಸಿದ ವಾರಂಟ್ ಆರೋಪಿ ಬಂಟ್ವಾಳ ಅರಳ ನಿವಾಸಿ ಸತೀಶ್ ದ್ರಾವಿಡ(37) ಎಂಬಾತನನ್ನು ಜೂನ್ 15 ರಂದು ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಶಿವಕುಮಾರ್‌ರವರ ನೇತೃತ್ವದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ಸಿಬ್ಬಂದಿ ವ್ರಷಭ ಹಾಗೂ ಬಸವರಾಜ್ ರವರು ಬಂಟ್ವಾಳದಿಂದ ವಶಕ್ಕೆ ಪಡೆದು ಮಾನ್ಯ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆರೋಪಿಗೆ ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ನೀಡಿದೆ.

error: Content is protected !!