ವಿದೇಶದಲ್ಲಿ ತಲೆಮರೆಸಿದ ವಾರಂಟ್ ಆಸಾಮಿ ಬೆಂಗಳೂರಿಗೆ ವಾಪಾಸ್:  ಏರ್ ಪೋರ್ಟ್ ನಲ್ಲಿ ಇಮಿಗ್ರೆಶನ್ ಅಧಿಕಾರಿಗಳ ವಶಕ್ಕೆ: ನ್ಯಾಯಾಲಯಕ್ಕೆ ಹಾಜರುಪಡಿಸಿದ ಬೆಳ್ತಂಗಡಿ ಪೊಲೀಸರು

ಬೆಳ್ತಂಗಡಿ : ವಿದೇಶದಲ್ಲಿ ತಲೆಮರೆಸಿದ ವಾರಂಟ್ ಆಸಾಮಿ ಅಬ್ದುಲ್ ನಜೀರ್ ಎಂಬಾತ ಮೇ.30ರಂದು ಬೆಂಗಳೂರಿಗೆ ವಾಪಸ್ ಆಗಿದ್ದು ಇಮಿಗ್ರೆಶನ್ ಅಧಿಕಾರಿಗಳು ಈತನನ್ನು ವಶಕ್ಕೆ ಪಡೆದು ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬೆಳ್ತಂಗಡಿ ಪೊಲೀಸ್ ಠಾಣಾ ಅಕ್ರ 40/2021 ಕಲಂ. 269, 34, 5(1) ಐ ಪಿ. ಸಿ ಮತ್ತು ಇ.ಡಿ.ಒ ಪ್ರಕರಣದಲ್ಲಿ ಈತ ತಲೆಮರೆಸಿಕೊಂಡಿದ್ದ. ಮೇ. 30 ರಂದು ವಿದೇಶದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಇಳಿದವನನ್ನು ಅಲ್ಲಿಯ ಇಮಿಗ್ರೆಶನ್ ಅಧಿಕಾರಿಗಳು ವಶಕ್ಕೆ ಪಡೆದು ಮೇಲಾಧಿಕಾರಿಗಳ ಆದೇಶದಂತೆ ಬೆಳ್ತಂಗಡಿ ಪೊಲೀಸ್ ಠಾಣಾ ಪಿಎಸ್ ಐ ಅರ್ಜುನ್ ಹಾಗು ಸಿಬ್ಬಂದಿಗಳಾದ ಹೆಚ್. ಸಿ ವೃಷಭ್, ಪಿ ಸಿ ಚರಣ್ ರಾಜ್, ಗಿರೀಶ್‌ ಈತನನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಿಂದ ವಶಕ್ಕೆ ಪಡೆದು ಮೇ.31 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು 12,100/- ರೂ. ದಂಡ ಪಾವತಿಸಿಕೊಂಡು ಪ್ರಕರಣವನ್ನು ಮುಕ್ತಾಯಗೊಳಿಸಿದೆ.

error: Content is protected !!