ಸಿದ್ಧರಾಮಯ್ಯ ಅವರಿಗೆ ಮಂಜುನಾಥ ಸ್ವಾಮಿಯ ಪ್ರಸಾದ: ಧರ್ಮಸ್ಥಳದಿಂದ ಬೆಂಗಳೂರಿಗೆ ಪ್ರಸಾದ ರವಾನೆ:

 

 

 

ಬೆಳ್ತಂಗಡಿ: ಕರ್ನಾಟಕ ವಿಧಾನ ಸಭಾ ಚುನಾವಣಾ ಫಲಿತಾಂಶ ಈಗಾಗಲೇ ಹೊರಬಿದಿದ್ದು ಕಾಂಗ್ರೆಸ್ 136 ಸ್ಥಾನಗಳನ್ನು ಗೆದ್ದು ಸರ್ಕಾರ ರಚನೆಗೆ ಮುಂದಾಗಿದೆ. ಈ ಮಧ್ಯೆಯೇ ಶ್ರಿ ಕ್ಷೇತ್ರ ಧರ್ಮಸ್ಥಳದಿಂದ ಸಿದ್ದರಾಮಯ್ಯನವರಿಗೆ ಪ್ರಸಾದ
ಇಂದು ರಾತ್ರಿ  ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಬೆಂಗಳೂರಿಗೆ ಅವರ ಆಪ್ತರ ಮೂಲಕ  ಕಳುಹಿಸಿಕೊಡಲಾಗಿದೆ.

ತೀರ್ಥ ಬಾಟಲ್ , ಬೆಲ್ಲಕಾಯಿ ಪ್ರಸಾದ , ಮಹಾಗಣಪತಿ ಪಂಚಕಜ್ಜಾಯ, ಶ್ರೀ ಪ್ರಸಾದ, ಕಲ್ಲುಸಕ್ಕರೆ ,ದ್ರಾಕ್ಷಿ , ಕುಂಕುಮ ಹೊಂದಿರುವ ಸೆಟ್ ಪ್ರಸಾದ ಸೇರಿದಂತೆ

ಆರು ಚೀಲ ಸೆಟ್ ಪ್ರಸಾದ , 8 ತೀರ್ಥ ಬಾಟಲ್ , 5 ಪ್ಯಾಕ್ ಬೆಲ್ಲಕಾಯಿ ಪ್ರಸಾದವನ್ನು ಬೆಂಗಳೂರಿಗೆ ಇಂದು ರಾತ್ರಿಯೇ ಕಳುಹಿಸಿಕೊಡಲಾಗಿದೆ.

ತನ್ನ ಆಪ್ತರಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ತರಿಸಲು ಅವರು ಸೂಚಿಸಿದ್ದರು

ಅದರಂತೆ ಧರ್ಮಸ್ಥಳದಿಂದ ಬೆಂಗಳೂರಿಗೆ ಪ್ರಸಾದವನ್ನು ರವಾನೆ ಮಾಡಲಾಗಿದ್ದು
ನಾಳೆ ಬೆಳಗ್ಗೆ ಬೆಂಗಳೂರಿಗೆ ತಲುಪಿ ನಂತರ ಸಿದ್ದರಾಮಯ್ಯ ಅವರ ಮನೆಗೆ ಪ್ರಸಾದವನ್ನು ಅವರ ಆಪ್ತರು  ಮುಟ್ಟಿಸಲಿದ್ದಾರೆ ಎಂದು ತಿಳಿದು ಬಂದಿದೆ.

error: Content is protected !!