ದನಿವರಿಯದಾತನಿಗೆ ಗೆಲುವಿನ ಸಂಭ್ರಮ: ತಾಲೂಕಿಗೆ ಮತ್ತೊಮ್ಮೆ ಹರೀಶ್ ಪೂಂಜ..!

ಬೆಳ್ತಂಗಡಿ : ತಾಲೂಕಿಗೆ ಮತ್ತೊಮ್ಮೆ ಶಾಸಕನಾಗಿ ಹರೀಶ್ ಪೂಂಜ ಆಯ್ಕೆಯಾಗಿದ್ದು, ಅಭಿವೃದ್ಧಿಯ ಹರಿಕಾರನಿಗೆ  18,216 ಮತಗಳ ಅಂತರದಲ್ಲಿ ಭರ್ಜರಿ ಜಯ ಸಿಕ್ಕಿದೆ.

2023ರ ವಿಧಾನ ಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 8 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು. 8 ಪಕ್ಷಗಳ ಪೈಕಿ ಕಾಂಗ್ರೆಸ್‌ನ ರಕ್ಷಿತ್ ಶಿವರಾಂ ಹಾಗೂ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮಧ್ಯೆ ಭಾರೀ ಪೈಪೋಟಿ ನಡೆದಿತ್ತು. ಮತದಾರರು ಯಾರನ್ನು ಗೆಲ್ಲಿಸುತ್ತಾರೆ ಎಂಬ ಊಹೆ ಕೂಡ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಪಕ್ಕಾ ಲೆಕ್ಕಾಚಾರದ ಬಳಿಕ ಹರೀಶ್ ಪೂಂಜ ಮತ್ತೆ 2ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದು ತಾಲೂಕಿನ ಮತದಾರರಲ್ಲಿ ಸಂತಸ ತಂದಿದೆ.

ಮತಣಿಕೆಯಲ್ಲಿ ಮೊದಲ ಸುತ್ತಿನಿಂದಲೇ 2 ಸಾವಿರ ಮತಗಳ ಅಂತರ ಕಾಯ್ದುಕೊಂಡ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಬಳಿಕ ಪ್ರತೀ ಸುತ್ತಿನಲ್ಲೂ ಹೆಚ್ಚು-ಹೆಚ್ಚು ಅಂತರ ಕಾಯ್ದುಕೊಂಡು ಗೆಲುವಿನತ್ತ ದಾಪುಗಾಲು ಇಡುತ್ತಾ ಬಂದಿದ್ದರು. ಕೊನೆಗೂ ತನ್ನ ಎದುರಾಳಿಗಳಾಗಿ ಚುನಾವಣ ಕದನ ನಡೆಸಿದ 7 ಅಭ್ಯರ್ಥಿಗಳನ್ನು ಸೋಲಿಸಿ 2ನೇ ಬಾರಿ ಶಾಸಕ ಪಟ್ಟವನ್ನು ತನ್ನದಾಗಿಸಿಕೊಂಡಿದ್ದಾರೆ.

ಹರೀಶ್ ಪೂಂಜ ಶಾಸಕರಾಗಿ ಆಯ್ಕೆಯಾದ ವಿಚಾರ ತಿಳಿಯುತ್ತಿದ್ದಂತೆ ತಾಲೂಕಿನಲ್ಲಿ ಸಂಭ್ರಮ ಜೋರಾಗಿದ್ದು ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು, ಹರೀಶ್ ಪೂಂಜ ಅಭಿಮಾನಿಗಳು ಕುಣಿದು-ಕುಪ್ಪಳಿಸಿದ್ದಾರೆ.

error: Content is protected !!