ಬೆಳ್ತಂಗಡಿ ಭಾರೀ ಗಾಳಿಗೆ ವಿದ್ಯುತ್ ತಂತಿಯಲ್ಲಿ ಸಿಲುಕಿಕೊಂಡ ಶಾಮಿಯಾನ..! ಹಲವೆಡೆ ವಿದ್ಯುತ್ ಸಂಪರ್ಕ ಕಡಿತ,ಕುವೆಟ್ಟು ಬಳಿ ಮನೆಗೆ ಹಾನಿ:

 

 

 

ಬೆಳ್ತಂಗಡಿ: ತಾಲೂಕಿನ ವಿವಿಧೆಡೆ ಇಂದು ಮಧ್ಯಾಹ್ನ ಸುರಿದ ಗಾಳಿ ಮಳೆಗೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿನ್ನೆ ನಡೆದ ಚುನಾವಣೆಗಾಗಿ ರಾಜಕೀಯ ಪಕ್ಷವೊಂದು ರಸ್ತೆ ಬದಿ  ಅಳವಡಿಸಿದ್ದ ಶಾಮಿಯಾನ ಗಾಳಿಗೆ ಹಾರಿ ಹೋಗಿ  ವಿದ್ಯುತ್ ತಂತಿಯಲ್ಲಿ ಸಿಲುಕಿಕೊಂಡಿದೆ. ಅದಲ್ಲದೇ ಹಲವೆಡೆ ಗಾಳಿಗೆ ಮರ ಬಿದ್ದು ರಸ್ತೆ ತಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.ಕುವೆಟ್ಟು ಗ್ರಾಮದಲ್ಲಿ ಕವಿತ ರಮೇಶ ಪೂಜಾರಿ ಎಂಬವರ ವಾಸದ ಮನೆಯ ಮೇಲ್ಚಾವಣಿ ಹಾರಿ ಹೋಗಿದ್ದು ಭಾಗಶಃ ಹಾನಿಯುಂಟಾಗಿದೆ.ಮೇಲಂತಬೆಟ್ಟುವಿನಲ್ಲಿಯೂ ಗಾಳಿಗೆ ಕೆಲವು ಮನೆಗಳಿಗೆ ಹಾನಿ ಉಂಟಾಗಿರುವ ಬಗ್ಗೆ ತಿಳಿದು ಬಂದಿದೆ.

error: Content is protected !!