ಬೆಳ್ತಂಗಡಿ ಭಾರೀ ಮಳೆ: ಗುರುವಾಯನಕೆರೆ ಬಳಿ ರಸ್ತೆಗೆ ಉರುಳಿಬಿದ್ದ ಮರ:ವಾಹನ ಸಂಚಾರಕ್ಕೆ ಅಡಚಣೆ:

 

 

 

 

ಬೆಳ್ತಂಗಡಿ: ತಾಲೂಕಿನ ಹಲವೆಡೆ ಇಂದು ಮಧ್ಯಾಹ್ನ ನಂತರ ಮಳೆಯಾಗಿದ್ದು ಬೆಳ್ತಂಗಡಿ ನಗರ ಹಾಗೂ ಗುರುವಾಯನಕರೆಲ್ಲೂ ಭಾರೀ ಮಳೆ ಸುರಿದಿದ್ದು ಪಿಲಿಚಂಡಿ ಕಲ್ಲು ಬಳಿ ಬೃಹತ್ ಮರವೊಂದು ರಸ್ತೆಗೆ ಉರುಳಿ ಬಿದ್ದ ಪರಿಣಾಮ ರಸ್ತೆ ಸಂಚಾರಕ್ಕೆ ತಡೆಯುಂಟಾಗಿದೆ.

 

 

 

ಸ್ಥಳೀಯರು ಜೆಸಿಬಿ ಮೂಲಕ ವಾಹನಗಳ ಸುಗಮ ಸಂಚಾರಕ್ಕಾಗಿ ಮರ  ತೆರವು ಮಾಡುತಿದ್ದಾರೆ. ಅದೇ ರೀತಿ  ಬೆಳ್ತಂಗಡಿ ಲೋಕೋಪಯೋಗಿ  ಕ್ವಾಟ್ರಸ್ ಬಳಿಯೂ  ಮರವೊಂದು ಉರುಳಿ ಬಿದ್ದು ಅವರಣ ಗೋಡೆಗೆ ಹಾಗೂ ವಿದ್ಯುತ್ ತಂತಿಗಳಿಗೆ ಹಾನಿಯುಂಟಾಗಿದೆ.

 

 

ಸವಣಾಲು ರಸ್ತೆಯ ಕಲ್ಕಣಿ ಬಳಿ ಮನೆಯೊಂದರ ತೆಂಗಿನ ಮರವೊಂದು ರಸ್ತೆಗೆ  ಉರುಳಿ ಬಿದ್ದ ಪರಿಣಾಮ ವಿದ್ಯುತ್ ಕಂಬಗಳಿಗೆ ಹಾನಿಯುಂಟಾಗಿದೆ.

 

 

error: Content is protected !!