ಬೆಳ್ತಂಗಡಿ ಮತ್ತೆ ಮುಂದುವರಿದ ಬೈಕ್ ಕಳ್ಳತನ ಪ್ರಕರಣ: ಹಾಡುಹಗಲೇ ಮತ್ತೊಂದು ಬೈಕ್ ಕಳ್ಳತನ:

 

 

ಬೆಳ್ತಂಗಡಿ : ಕೆಲಸಕ್ಕೆಂದು ಬೆಳಿಗ್ಗೆ ಬೈಕ್ ನಿಲ್ಲಿಸಿ ಕೆಲಸ ಮುಗಿಸಿ ಸಂಜೆ ವೇಳೆಗೆ ವಾಪಸ್ ಮನೆಗೆ ತೆರಳಲು ಬೈಕ್ ಬಳಿಗೆ ಬಂದಾಗ ಬೈಕ್ ನಾಪತ್ತೆಯಾದ ಘಟನೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಮಾವಿನಕಟ್ಟೆ ನಿವಾಸಿ ರವಿ ಎಂಬವರು ವಿದ್ಯುತ್ ಲೈನ್ ಕೆಲಸಕ್ಕೆ ಹೋಗಲು ಕೊಯ್ಯೂರಿನಿಂದ ಪಲ್ಸರ್ 150 ಬೈಕ್ ನಲ್ಲಿ ಬರುತಿದ್ದು. ಬೈಕ್ ನ್ನು ಬೆಳ್ತಂಗಡಿಯ ಬಸ್ ನಿಲ್ದಾಣದ ಸಮೀಪದ ಎಸ್ ಸಿ ಡಿಸಿಸಿ ಬ್ಯಾಂಕ್ ಹಿಂಬದಿ ನಿಲ್ಲಿಸಿ ಹೋಗುತ್ತಿದ್ದರು. ಡಿ.22 ರಂದು ಬೆಳಗ್ಗೆ ಎಂದಿನಂತೆ 9:30 ಕ್ಕೆ ಬೈಕ್ ನಿಲ್ಲಿಸಿ ಹೋಗಿದ್ದರು ಸಂಜೆ 6:30 ಕ್ಕೆ ಮನೆಗೆ ತೆರಳಲು ಬೈಕ್ ಬಳಿ ಹೋದಾಗ ಬೈಕ್ ನಾಪತ್ತೆಯಾಗಿತ್ತು. ಸುತ್ತಮುತ್ತ ಹುಡುಕಾಟ ನಡೆಸಿದರೂ ಪ್ರಯೋಜವಾಗಿಲ್ಲ. ಸ್ಥಳದಲ್ಲಿ ಉಳಿದ 6 ಬೈಕ್ ನಿಲ್ಲಿಸಿದ್ದಲ್ಲೇ ಇತ್ತು. ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಎಎಸ್ಐ ದೇವಪ್ಪ ಮತ್ತು ಕ್ರೈಂ ಸಿಬ್ಬಂದಿ ಚರಣ್ ರಾಜ್ ಬಂದು ಪರಿಶೀಲನೆ ನಡೆಸಿದ್ದು. ಸುತ್ತಮುತ್ತಲಿನ ಸಿಸಿ ಕ್ಯಾಮರದ ಪರಿಶೀಲನೆಯಲ್ಲಿ ತೊಡಗಿದ್ದಾರೆ.ಕಳೆದ ಕೆಲವು ದಿನಗಳ ಹಿಂದೆಯಷ್ಟೆ ಪಕ್ಕದಲ್ಲೇ ಬೈಕೊಂದು ಕಳ್ಳತನವಾಗಿದ್ದು ವಾರಗಳ ನಡುವೆ ಇದು ಎರಡನೇ ಕಳ್ಳತನವಾಗಿದೆ.‌

error: Content is protected !!