ಬಸ್ಸ್ ದ್ವಿಚಕ್ರ ವಾಹನ ಡಿಕ್ಕಿ ಸವಾರ   ಸಾವು:ಕೊಯ್ಯೂರು ಕ್ರಾಸ್ ಬಳಿ ಘಟನೆ:

 

 

 

 

ಬೆಳ್ತಂಗಡಿ:  ಬಸ್ಸ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿ ಮತ್ತೋರ್ವ ಸವಾರ  ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾದ  ಘಟನೆ ಇಂದು ಸಂಜೆ ನಡೆದಿದೆ.

ಉಜಿರೆಯಿಂದ ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ತೆರಳುತ್ತಿರುವ ವೇಳೆ ಕೊಯ್ಯೂರು ಕ್ರಾಸ್ ಬಳಿ  ಬೈಕ್ಕಿಗೆ  ಹುಬ್ಬಳ್ಳಿಯಿಂದ ಧರ್ಮಸ್ಥಳಕ್ಕೆ ಬರುತಿದ್ದ  ಕೆ  ಎಸ್ ಆರ್ ಟಿ ಸಿ ಬಸ್ಸ್ ಡಿಕ್ಕಿ ಹೊಡೆದಿದೆ. ಈ ವೇಳೆ ರಸ್ತೆ ಗೆಸೆಯಲ್ಪಟ್ಟು ವಿಜಯ್ ( 25) ಗಂಭೀರ ಗಾಯಗೊಂಡಿದ್ದರು ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮತ್ತೋರ್ವ ಸವಾರ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಮೃತ ಯುವಕ ಬಂಟ್ವಾಳದ ನಾವೂರು  ಸಮೀಪದವರೆಂದು ತಿಳಿದು ಬಂದಿದೆ. ತಂದೆ ಇಲ್ಲದ  ವಿಜಯ್ ಅವರು    ತಾಯಿ ಮತ್ತು  ತಂಗಿಯೊಂದಿಗೆ ವಾಸವಾಗಿದ್ದರು. ದಿನಾ ಉಜಿರೆಗೆ ಕೆಲಸಕ್ಕೆ ಬಂದ್ದು ಸಂಜೆ ಬೈಕ್ಕಿನಲ್ಲಿ ಮನೆಗೆ ತೆರಳುತಿದ್ದರು. ಇವತ್ತೂ ಕೂಡ ಕೆಲಸ ಬಿಟ್ಟು ಮನೆಗೆ ತೆರಳುತ್ತಿರುವಾಗ ಈ ಘಟನೆ ನಡೆದಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!