₹ 22.10 ಕೋಟಿ ವೆಚ್ಚದ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾಮಗಾರಿಗಳಿಗೆ ತಾಲೂಕಿನ ವಿವಿಧೆಡೆ ನಾಳೆ ಶಿಲಾನ್ಯಾಸ: ಬಹುವರ್ಷಗಳ ಬೇಡಿಕೆ ಚಂದ್ಕೂರು- ಕುತ್ರೊಟ್ಟು ಕಿಂಡಿ ಅಣೆಕಟ್ಟು ಕಾಮಗಾರಿಗೆ ಶಾಸಕ ಹರೀಶ್ ಪೂಂಜರಿಂದ ಚಾಲನೆ

 

 

 

ಬೆಳ್ತಂಗಡಿ: ತಾಲೂಕಿನ ವಿವಿಧ ಕಡೆಗಳಲ್ಲಿ 22.10 ಕೋಟಿ ರೂ ಗಳ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾಮಗಾರಿಗಳ ಶಿಲಾನ್ಯಾಸವನ್ನು ಶಾಸಕ ಹರೀಶ್ ಪೂಂಜ ನಾಳೆ ಮಾ 11 ರಂದು ನೆರವೇರಿಸಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ 4 ಕೋ. ರೂ. ನಡ ಗ್ರಾಮದ ಕುತ್ರೊಟ್ಟು ಚಂದ್ಕೂರು, ನಂತರ ನಡಗ್ರಾಮದ ಮೂಡಾಯಿಬೆಟ್ಟು ಭೋಜರ ಕೈಕಂಬ 1.95 ಕೋ, ಇಂದಬೆಟ್ಟು ಗ್ರಾಮದ ಅಲೆಂಜ ಕಟ್ಟ ಮೋಟೆತಡ್ಕ 2.45 ಕೋ, ಮಲವಂತಿಗೆ ಗ್ರಾಮದ ನೇತ್ರಕೊಡಂಗೆ 2.50 ಕೋ, ನಿಡ್ಲೆ ಗ್ರಾಮದ ಕುದ್ರಾಯ ವಾಲ್ಯ 4.05 ಕೋ, ಕೊಕ್ಕಡ ಗ್ರಾಮದ ಕೊಡಿಂಗೇರಿ ಉಪ್ಪರಹಳ್ಳ 3.35 ಕೋ, ಶಿಬಾಜೆ ಗ್ರಾಮದ ಬರ್ಗುಳಕಟ್ಟ 3.80 ಕೋಟಿ ರೂ ಗಳ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.

error: Content is protected !!