ಪಂಚ ರಾಜ್ಯಗಳ ಚುನಾವಣೆ: ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಹಾಗೂ ಮಂಡಲ ವತಿಯಿಂದ ವಿಜಯೋತ್ಸವ.

 

 

ಬೆಳ್ತಂಗಡಿ: ಉತ್ತರ ಪ್ರದೇಶದ ಸೇರಿದಂತೆ ಪಂಚ ರಾಜ್ಯ ಚುನಾವಣೆಯಲ್ಲಿ  ಬಿಜೆಪಿ ಅಭೂತಪೂರ್ವ ಮುನ್ನಡೆ ಸಾಧಿಸಿದ್ದಲ್ಲದೇ ಉತ್ತರ ಪ್ರದೇಶದಲ್ಲಿ ಎರಡನೇ ಬಾರಿ  ಗೆಲುವನ್ನು ಸಾಧಿಸಿ ಪೂರ್ಣ ಬಹುಮತದೊಂದಿಗೆ  ಅಧಿಕಾರಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಬಿಜೆಪಿ   ಯುವ ಮೊರ್ಚಾ ಮತ್ತು ಮಂಡಲ ವತಿಯಿಂದ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಬೆಳ್ತಂಗಡಿ ನಗರದ ಬಿಜೆಪಿ ಕಛೇರಿ ಎದುರು ಕಾರ್ಯಕರ್ತರು ಸಂಭ್ರಮವನ್ನಾಚರಿಸಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಸದಸ್ಯರಾದ ಶರತ್ ಕುಮಾರ್, ಲೋಕೇಶ್, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಯಶವಂತ್, ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ಸಹಕಾರ ಭಾರತಿ ಅಧ್ಯಕ್ಷ ರಾಜೇಶ್ ಪೆಂರ್ಬುಡ, ಲಾಯಿಲಾ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್, ಮೇಲಂತಬೆಟ್ಟು ಗ್ರಾಪಂ ಸದಸ್ಯ ಪ್ರಭಾಕರ ಆಚಾರ್, ಪಕ್ಷದ ಪ್ರಮುಖರಾದ ಗಿರೀಶ್ ಡೋಂಗ್ರೆ, ರಾಜೇಶ್ ಪ್ರಭು, ಸುಧಾಕರ ಬಿ.ಎಲ್., ವಿಠಲ ಆಚಾರ್ಯ, , ಶಶಿರಾಜ್ ಗುರುವಾಯನಕೆರೆ, ಆದರ್ಶ್ ಜೈನ್, ಪ್ರತೀಶ್ ಹೊಸಂಗಡಿ, ಜಗದೀಶ್ ಕನ್ನಾಜೆ, ಯತೀಶ್, ಸಿಕೆ. ಚಂದ್ರಕಲಾ ಮುಂತಾದವರು ಇದ್ದರು

error: Content is protected !!